ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಹ ರೈತರು ಕಡ್ಡಾಯ ಇಕೆವೈಸಿಯನ್ನ ಪೂರ್ಣಗೊಳಿಸಲು ಈಗ ಕೇವಲ 3 ದಿನಗಳು ಮಾತ್ರ ಉಳಿದಿವೆ ಅನ್ನೋದನ್ನ ಗಮನಿಸಬೇಕು. ಈ ಗಡುವಿನೊಳಗೆ ನೀವು ಇಕೆವೈಸಿಯನ್ನ ತಪ್ಪಿಸಿಕೊಂಡರೆ, ಈ ಯೋಜನೆಯ ಮುಂದಿನ ಕಂತು ಖಾತೆ ಸೇರದೇ ಇರಬೋದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಕಡ್ಡಾಯ ಇಕೆವೈಸಿಯನ್ನ ಪೂರ್ಣಗೊಳಿಸಲು ಸರ್ಕಾರವು ಈ ಹಿಂದೆ ಜುಲೈ 31, 2022ರ ಗಡುವನ್ನ ನಿಗದಿಪಡಿಸಿತ್ತು. ಆದ್ರೆ, ಈ ಕಾರಣದಿಂದಾಗಿ, ಹೆಚ್ಚಿನ ರೈತರು ಇಕೆವೈಸಿಯನ್ನ ಸಮಯಕ್ಕೆ ಸರಿಯಾಗಿ ಮಾಡಲು ವಿಫಲರಾದರು.
ಪಿಎಂಕಿಸಾನ್ʼನ ಅಧಿಕೃತ ವೆಬ್ ಸೈಟ್ ಪ್ರಕಾರ ಕವೈಸಿ ಪೂರ್ಣಗೊಳಿಸಲು ಈ ಮೂರರಲ್ಲಿ ಒಂದನ್ನ ಬಳಸಬೋದು. ಅಂದ್ಹಾಗೆ, ಪಿಎಂಕಿಸಾನ್ ನೋಂದಾಯಿತ ರೈತರಿಗೆ ಇಕೆವೈಸಿ ಕಡ್ಡಾಯವಾಗಿದೆ.
* ಒಟಿಪಿ ಆಧಾರಿತ ಇಕೆವೈಸಿ ಪಿಎಂಕಿಸಾನ್ ಪೋರ್ಟಲ್ನಲ್ಲಿ ಲಭ್ಯವಿದೆ.
* ಬಯೋಮೆಟ್ರಿಕ್ ಆಧಾರಿತ ಇಕೆವೈಸಿಗಾಗಿ ಹತ್ತಿರದ ಸಿಎಸ್ಸಿ ಕೇಂದ್ರಗಳನ್ನ ಸಂಪರ್ಕಿಸಬಹುದು.
* ನಿಮ್ಮ ಆಧಾರ್ ಸಂಖ್ಯೆಯನ್ನ ಬಳಸಿಕೊಂಡು ಒಟಿಪಿ ಆಧಾರಿತ ಇಕೆವೈಸಿ ಲಿಂಕ್ ಕ್ಲಿಕ್ ಮಾಡುವ ಮೂಲಕ ಕೆವೈಸಿ ಪೂರ್ಣಗೊಳಿಸಬೋದು.
ಅಂದ್ಹಾಗೆ, ಎಲ್ಲಾ ಪಿಎಂಕಿಸಾನ್ ಫಲಾನುಭವಿಗಳಿಗೆ ಇಕೆವೈಸಿ ಗಡುವನ್ನ ಆಗಸ್ಟ್ 31, 2022 ರವರೆಗೆ ವಿಸ್ತರಿಸಲಾಗಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now