ವಿಜಯವಾಣಿ

505k Followers

ತುಂಬಾ ಕ್ಲೋಸ್​ ಆಗಿ ಇದ್ದಿದ್ದೇ ತಪ್ಪಾಯ್ತಾ? ಶಿಕ್ಷಕಿ ದುರಂತ ಸಾವು, ಡೆತ್​ನೋಟ್​ನಲ್ಲಿತ್ತು ದೈಹಿಕ ಶಿಕ್ಷಕನ ಕರಾಳ ಮುಖ

24 Nov 2022.11:27 AM

ಕೊಚ್ಚಿ: ಶಿಕ್ಷಕಿಯೊಬ್ಬಳ ಆತ್ಮಹತ್ಯೆ ಪ್ರಕರಣ ಸಂಬಂಧ ಅದೇ ಶಾಲೆಯ ಮತ್ತೊಬ್ಬ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಡೆತ್​ನೋಟ್​ನಲ್ಲಿ ಶಿಕ್ಷಕನ ಹೆಸರು ಉಲ್ಲೇಖವಾಗಿದ್ದರಿಂದ ಆತನನ್ನು ಬಂಧಿಸಲಾಗಿದೆ.

ಬಂಧಿತನನ್ನು ರಾಮದಾಸ್​​ ಎಂದು ಗುರುತಿಸಲಾಗಿದೆ.

ಈತ ಮಲಪ್ಪುರಂ ಜಿಲ್ಲೆಯ ವೆಂಗಾರಾ ಮಾಡೆಲ್​ ಟೌನ್​ನ ಪ್ರೌಢಶಾಲೆಯ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಮದಾಸ್​ನಲ್ಲಿ ಬಂಧಿಸಲಾಗಿದೆ.

ಮೃತ ಟಿ ಬೈಜು ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಸೆ. 17ರಂದು ಆಕೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬೈಜು ಮತ್ತು ರಾಮದಾಸ್​ ವಿದ್ಯಾರ್ಥಿ ಪೊಲೀಸ್​​ ಕೆಡೆಟ್​ನ ಉಸ್ತುವಾರಿಯಾಗಿದ್ದರು.

ಬೈಜು ಬರೆದಿದ್ದ ಡೆತ್​ನೋಟ್‌ನಲ್ಲಿ ರಾಮದಾಸ್​ ಹೆಸರನ್ನು ನಮೂದಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸಾಕ್ಷಿಗಳ ಹೇಳಿಕೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳು ರಾಮದಾಸ್ ವಿರುದ್ಧ ಇವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯವು ಪೊಲೀಸರಿಗೆ ಒಪ್ಪಿಸಿದೆ.

ಇನ್ನು ಬೈಜು ಮತ್ತು ರಾಮದಾಸ್​ ನಡುವೆ ತುಂಬಾ ಕ್ಲೋಸ್​ನೆಸ್​ ಇತ್ತು. ಅದನ್ನೇ ದುರುಪಯೋಗ ಪಡಿಸಿಕೊಂಡ ಆತ, ಶಿಕ್ಷಕಿಯನ್ನು ಮಾನಸಿಕ ಹಿಂಸೆಗೆ ದೂಡಿದ್ದ ಎಂಬುದು ಡೆತ್​ನೋಟ್​ನಿಂದ ತಿಳಿದುಬಂದಿದೆ. ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೈಜು ಸೆ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್​ನೋಟ್​ ಪತ್ತೆಯಾದ ಹಿನ್ನೆಲೆಯಲ್ಲಿ ರಾಮದಾಸ್​ನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags