Vistara News

43k Followers

Man murdered | ಐದು ಅಡಿ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ, ಹೆಲ್ಮೆಟ್‌ನಲ್ಲಿ ಹೊಡೆದು ವ್ಯಕ್ತಿಯ ಕೊಲೆ

25 Nov 2022.2:54 PM

ಕೇವಲ ಐದು ಅಡಿ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ನಡೆದ ಜಗಳ, ಮಾರಾಮಾರಿ ಒಂದು ಕೊಲೆಗೆ ಕಾರಣವಾಗಿದೆ. ಮಾತಿಗೆ ಮಾತು ಬೆಳೆದ ಹೆಲ್ಮೆಟ್‌ನಿಂದ ಹೊಡೆದು ವ್ಯಕ್ತಿಯನ್ನು ಸಾಯಿಸಲಾಗಿದೆ.

ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಈ ಜಗಳ ನಡೆದಿದ್ದು, ಗಲಾಟೆಯಲ್ಲಿ ನಿವೃತ್ತ ಶಿಕ್ಷಕ ಶೇಖರಪ್ಪ ಸಾವು ಕಂಡಿದ್ದಾರೆ.

ಅವರನ್ನು ಹೆಲ್ಮೆಟ್‌ನಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶೇಖರಪ್ಪ ಗುರುವಾರ ಪ್ರಾಣ ಕಳೆದುಕೊಂಡಿದ್ದಾರೆ.

ಗಲಾಟೆಯಲ್ಲಿ ಎರಡೂ ಕುಟುಂಬಗಳ ಹಲವರಿಗೆ ಗಾಯಗಳಾಗಿವೆ. ಇದೀಗ ಶೇಖರಪ್ಪ ಅವರು ಪ್ರಾಣ ಕಳೆದುಕೊಂಡಿರುವುದರಿಂದ ಅವರ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪೊಲೀಸ್‌ ಠಾಣೆ ಬಳಿ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಪೊಲೀಸರು ಉಮೇಶ್, ಮಲ್ಲಿಕಾರ್ಜುನ, ರಾಜು ಮತ್ತು ದೇವಿಕಾ ಎಂಬವರನ್ನು ಬಂಧಿಸಿದ್ದಾರೆ. ನಿವೇಶನಕ್ಕೆ ಹೋಗುವ ದಾರಿಯ ವಿಚಾರದಲ್ಲಿ ಈ ಜಗಳ ಆರಂಭವಾಗಿತ್ತು.

| Murder Case | ಸ್ನೇಹಿತನನ್ನೇ ಕೊಲೆ ಮಾಡಿ, ಮೃತದೇಹದೊಂದಿಗೆ ಪೊಲೀಸ್‌ ಠಾಣೆಗೆ ಬಂದ!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vistara News

#Hashtags