Kannada News Now

1.8M Followers

ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್

09 Jul 2020.06:20 AM

ನವದೆಹಲಿ : ಕೇಂದ್ರ ಸರ್ಕಾರವು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಉಜ್ವಲ ಫಲಾನುಭವಿಗಳಿಗೆ ನೀಡುವ ಅಡುಗೆ ಅನಿಲ ಸಂಪರ್ಕವನ್ನು ಜುಲೈನಿಂದ ಅನ್ವಯವಾಗುವಂತೆ 3 ತಿಂಗಳು ವಿಸ್ತರಣೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯ ಕಾರ್ಮಿಕರಿಗೆ ನೀಡುತ್ತಿರುವ ಶೇ. 24 ರ ಭವಿಷ್ಯ ನಿಧಿವಂತಿಕೆ ಅನುದಾನವನ್ನು ಆಗಸ್ಟ್ ತಿಂಗಳಿಗೂ ವಿಸ್ತರಿಸಲಾಗಿದೆ. ಇದರಿಂದ 72 ಲಕ್ಷ ಕಾರ್ಮಿಕರು, 3.67 ಲಕ್ಷ ಕಂಪನಿಗಳಿಗೆ ಅನುಕೂಲವಾಗಲಿದೆ.

ಇನ್ನು ನಗರ ಪ್ರದೇಶದ ವಲಸಿಗರು ಮತ್ತು ಬಡವರಿಗೆ ಕೈಗೆಟ್ಟುಕುವ ದರದಲ್ಲಿ ಬಾಡಿಗೆ ಮನೆ ಯೋಜನೆಯ ಅಭಿವೃದ್ಧಿ.

ಈಗಾಗಲೇ ನಿರ್ಮಾಣವಾಗಿ ಖಾಲಿ ಇರುವ ವಸತಿಗಳನ್ನು ಈ ವಲಸಿಗರುಉ ಮತ್ತು ಬಡವರಿಗೆ ಹಂಚಿಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags