ನವದೆಹಲಿ : COVID-19 ನಿಂದಾಗಿ ಇಡೀ ಭಾರತದ ಅರ್ಥ ವ್ಯವಸ್ಥೆ ಭಾರೀ ಬಿಕ್ಕಟ್ಟಿನಲ್ಲಿದ್ದು, ಮುಂಬರುವ ತಿಂಗಳುಗಳಲ್ಲಿ ಡಿಎ (ತುಟ್ಟಿಭತ್ಯೆ) ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರಿ ನೌಕರಿಗೆ ಕೇಂದ್ರ ಸರ್ಕಾರವು ಸರ್ಕಾರ ವು ಕೈಗಾರಿಕಾ ಕಾರ್ಮಿಕರಿಗಾಗಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯು) ಮೂಲ ವರ್ಷವನ್ನು ಪರಿಷ್ಕರಿಸಲು ಸಿದ್ಧತೆ ನಡೆಸಿತ್ತು, ಇದು ಲಕ್ಷಾಂತರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಕೈಗಾರಿಕಾ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.
ಇದು ಇತ್ತೀಚಿನ ದಿನಗಳಲ್ಲಿ ಹೊಸ ಬಳಕೆಮಾದರಿಯನ್ನು ಪ್ರತಿಬಿಂಬಿಸುತ್ತದೆ. 2001ರಿಂದ ಸಿಪಿಐ-ಐಡಬ್ಲ್ಯೂ ಅನ್ನು ಪರಿಷ್ಕರಿಸಲಾಗಿದೆ, ಪ್ರತಿ ಐದು ವರ್ಷಗಳಿಗೊಮ್ಮೆ ಇದನ್ನು ಪರಿಷ್ಕರಿಸಬೇಕು. ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ), ಪಿಂಚಣಿದಾರರ ತುಟ್ಟಿಭತ್ಯೆ (ಡಿಆರ್) ಮತ್ತು ಕೈಗಾರಿಕಾ ಕಾರ್ಮಿಕರ ವೇತನ ಗಳೆರಡನ್ನೂ ಲೆಕ್ಕ ಹಾಕಲು ಸೂಚ್ಯಂಕವನ್ನು ಬಳಸಲಾಗುತ್ತದೆ.ಒಂದು ವೇಳೆ ಎಲ್ಲಾ ಅಂದುಕೊಂಡತೇ ಆದರೆ
ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಡಿಎ ಹೆಚ್ಚಿಸಲಾಗುವುದು, ಇದರಿಂದಾಗಿ 48 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರಿಗೆ ಲಾಭವಾಗುತ್ತದೆ.
ವಿಶೇಷ ಹಬ್ಬ ಮುಂಗಡ ಯೋಜನೆ, ಗೆಜೆಟೆಡ್ ಅಥವಾ ಗೆಜೆಟೆಡ್ ಅಧಿಕಾರಿಗಳಲ್ಲಾಗಲಿ ಯಾವುದೇ ಇರಲಿ, ಎಲ್ಲ ಅಧಿಕಾರಿ ಗಳಿಗೂ ಕೇಂದ್ರ ಸರ್ಕಾರಿ ನೌಕರರಿಗೆ 10 ಸಾವಿರ ರೂ.ಗಳ ಬಡ್ಡಿ ರಹಿತ ಮುಂಗಡ ವನ್ನು ನೀಡಲಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now