Kannada News Now

1.8M Followers

BIG BREAKING : ಇನ್ಮುಂದೆ ರಾಜ್ಯಾಧ್ಯಂತ 'ಹಿಂಬದಿಯ ಬೈಕ್ ಸವಾರ'ರಿಗೂ ಹೆಲ್ಮೆಟ್ ಕಡ್ಡಾಯ : ಹೆಲ್ಮೆಟ್ ಧರಿಸದಿದ್ರೇ ಪರವಾನಗಿ ಅಮಾನತು - ರಾಜ್ಯ ಸರ್ಕಾರ ಆದೇಶ

19 Oct 2020.3:47 PM

ಬೆಂಗಳೂರು : ಈಗಾಗಲೇ ಸಂಚಾರ ನಿಯಮ ಉಲ್ಲಂಘನೆ ದಂಡ ದುಬಾರಿಗೊಳಿಸಿ, ಆನಂತ್ರ ಕಡಿತಗೊಳಿಸಿದ್ದಂತ ರಾಜ್ಯ ಸರ್ಕಾರ, ಈಗ ರಾಜ್ಯದ ಬೈಕ್ ಸವಾರರಿಗೆ ಮತ್ತೊಂದು ಶಾಕ್ ನೀಡಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಮಾತ್ರವೇ ಜಾರಿಯಲ್ಲಿದ್ದಂತ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮವನ್ನು ರಾಜ್ಯಾಧ್ಯಂತ ವಿಸ್ತರಿಸಲಾಗಿದೆ. ಅಲ್ಲದೇ ಹೆಲ್ಮೆಟ್ ಧರಿಸದೇ ಸಂಚಾರಿ ಪೊಲೀಸರಿಗೆ ಸಿಕ್ಕಿಬಿದ್ದರೇ, ಅಂತಹ ವಾಹನ ಸವಾರರ ಪರವಾನಗಿಯನ್ನೇ ಮೂರು ತಿಂಗಳು ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆ ಆದೇಶಿಸಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ರಾಜ್ಯದಲ್ಲೂ ಜಾರಿಗೆ ತರಲಾಗಿದೆ. ಹೀಗಿದ್ದೂ ಅನೇಕ ವಾಹನ ಸವಾರರು ಸಂಚಾರ ನಿಯಮವನ್ನು ಮೀರುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಗೊಂಡಿಲ್ಲ.

ಇದೀಗ ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಹೆಲ್ಮೆಟ್ ಧರಿಸಿದೇ(ಹಿಂಬದಿಯ ಸವಾರ ಸೇರಿದಂತೆ) ದ್ವಿಚಕ್ರ ವಾಹನ ಚಲಾಯಿಸಿದ್ರೇ.. ಅಂತಹ ವಾಹನ ಸವಾರನ ಪರವಾನಗಿಯನ್ನೇ ರದ್ದು ಪಡಿಸುವಂತ ಕಠಿಣ ನಿಯವನ್ನು ಜಾರಿಗೊಳಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಹೆಲ್ಮೆಟ್ ಧರಿಸದೇ ಸಂಚರಿಸುವ ಸವಾರರ ವಿರುದ್ಧ ವಾಹನಗಳ ಕಾಯ್ದೆ 1988 ಕಲಂ 194-ಟಿ ಅನ್ವಯ ದಂಡ ವಸೂಲಾತಿಯೊಂದಿಗೆ ವಾಹನ ಸವಾರರ ಚಾಲನಾ ಪರವಾನಗಿಯನ್ನು ಕನಿಷ್ಠ ಮೂರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾಗುತ್ತದೆ. ಈ ನಿಮಯ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ತಿಳಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags