ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ರಾಜ್ಯ ಸರ್ಕಾರಿ ನೌಕರರು ಯಾವುದೇ ಜಾತಿ ಮತ್ತು ಧರ್ಮದ ಆಧಾರದಲ್ಲಿ ಸೇವಾ ಸಂಘಗಳನ್ನು ರಚಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದಿಂದ ಗ್ರಾಮೀಣಾ ಜನತೆಗೆ ಮತ್ತೊಂದು ಶುಭಸುದ್ದಿ
ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಈಗಾಗಲೇ ಇರುವ ಜಾತಿ ಸಂಘಗಳನ್ನು ರದ್ದುಪಡಿಸುವಂತೆ ಆದೇಶ ಹೊರಡಿಸಿದ್ದು, ಸರ್ಕಾರಿ ನೌಕರರ ಸೇವಾ ಸಂಘಗಳಿಗೆ ಮಾನ್ಯತೆ ನೀಡುವಾಗ ಸಂಘವು ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವವ ಸೇವಾ ಸಂಘಗಳಿಗೆ ಮಾತ್ರ ಆಡಳಿತ ಇಲಾಖೆಗಳು ಮಾನ್ಯತೆ ನೀಡುವಂತೆ ಮತ್ತು ಈಗಾಗಲೇ ಜಾತಿ, ಧರ್ಮ ಒಳಗೊಂಡ ಯಾವುದೇ ಸಮೂಹದ ಆಧಾರದಲ್ಲಿ ರಚಿತವಾಗಿರುವ ಸೇವಾ ಸಂಘಗಳ ಮಾನ್ಯತೆಯನ್ನು ರದ್ದು ಪಡಿಸುವಂತೆ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ ಸೂಚನೆ ನೀಡಿದೆ.
ಚುನಾವಣೆ ಉದ್ದೇಶಕ್ಕೆ ಮಾತ್ರ ಗುರುತಿನ ಚೀಟಿ ಬಳಸುವಂತೆ ಕಾನೂನು : ಡಾ.ಸಂಜೀವ್ ಕುಮಾರ್
Disclaimer
This story is auto-aggregated by a computer program and has not been created or edited by Dailyhunt Publisher: Kannada News Now