ಹೈದರಾಬಾದ್: ಸರ್ಕಾರಿ ಉದ್ಯೋಗಿಗಳಿಗೆ ಶೇ.30 ರಷ್ಟು ವೇತನ ಏರಿಕೆ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಶೇ.7.5 ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ವೇತನ ಆಯೋಗ ಶಿಪಾರಸ್ಸು ಮಾಡಿತ್ತು. ಆದರೆ ಸರ್ಕಾರ ಶೇ. 30 ರಷ್ಟು ವೇತನ ಏರಿಕೆ ಮಾಡಿದೆ, ಇದರಿಂದ ಸರ್ಕಾರಕ್ಕೆ 8 ಸಾವಿರ ಕೋಟಿ ರು ಹೊರೆಯಾಗಲಿದೆ.
ರಾಜ್ಯದ 9.17 ಲಕ್ಷ ಸರ್ಕಾರಿ ಉದ್ಯೋಗಿಗಳಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ಇದು ಅನ್ವಯಿಸಲಿದೆ. ಈಗಾಗಲೇ ಶೇ. 80ರಷ್ಟು ಅರ್ಹ ಉದ್ಯೋಗಗಳಿಗೆ ಬಡ್ತಿ ನೀಡಲಾಗಿದೆ, ಇಳಿದ ನೌಕರರಿಗೂ ಶೀಘ್ರವೇ ಬಡ್ತಿ ನೀಡಲಾಗುವುದು ಎಂದು ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಬಡ್ತಿಯಿಂದ ತೆರವಾದ ಸ್ಥಾನಗಳಿಗೆ ಸೀಘ್ರವೇ ಹೊಸದಾಗಿ ನೋಟಿಪಿಕೇಷನ್ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada Prabha