ಕನ್ನಡ ಪ್ರಭ

1.2M Followers

ತೆಲಂಗಾಣ ಸರ್ಕಾರಿ ನೌಕರರಿಗೆ ಕೆಸಿಆರ್ ಭರ್ಜರಿ ಗಿಫ್ಟ್: ಶೇ.30ರಷ್ಟು ವೇತನ ಹೆಚ್ಚಳ; ನಿವೃತ್ತಿ ವಯಸ್ಸು 61ಕ್ಕೆ ಏರಿಕೆ

22 Mar 2021.2:01 PM

ಹೈದರಾಬಾದ್: ಸರ್ಕಾರಿ ಉದ್ಯೋಗಿಗಳಿಗೆ ಶೇ.30 ರಷ್ಟು ವೇತನ ಏರಿಕೆ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ಶೇ.7.5 ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ವೇತನ ಆಯೋಗ ಶಿಪಾರಸ್ಸು ಮಾಡಿತ್ತು. ಆದರೆ ಸರ್ಕಾರ ಶೇ. 30 ರಷ್ಟು ವೇತನ ಏರಿಕೆ ಮಾಡಿದೆ, ಇದರಿಂದ ಸರ್ಕಾರಕ್ಕೆ 8 ಸಾವಿರ ಕೋಟಿ ರು ಹೊರೆಯಾಗಲಿದೆ.

ರಾಜ್ಯದ 9.17 ಲಕ್ಷ ಸರ್ಕಾರಿ ಉದ್ಯೋಗಿಗಳಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ಇದು ಅನ್ವಯಿಸಲಿದೆ. ಈಗಾಗಲೇ ಶೇ. 80ರಷ್ಟು ಅರ್ಹ ಉದ್ಯೋಗಗಳಿಗೆ ಬಡ್ತಿ ನೀಡಲಾಗಿದೆ, ಇಳಿದ ನೌಕರರಿಗೂ ಶೀಘ್ರವೇ ಬಡ್ತಿ ನೀಡಲಾಗುವುದು ಎಂದು ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಬಡ್ತಿಯಿಂದ ತೆರವಾದ ಸ್ಥಾನಗಳಿಗೆ ಸೀಘ್ರವೇ ಹೊಸದಾಗಿ ನೋಟಿಪಿಕೇಷನ್ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇನ್ನೂ ಶೀಘ್ರವೇ ಶಿಕ್ಷಕರಿಗೂ ಬಡ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 58ರಿಂದ 61 ವರ್ಷಕ್ಕೆ ಏರಿಕೆ ಮಾಡಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags