Kannada News Now

1.8M Followers

ವೈಯಕ್ತಿಕ ದ್ವೇಷಕ್ಕೆ ಸರ್ಕಾರಿ ನೌಕರರ ಖಾಸಗಿ ಮಾಹಿತಿ ಕೇಳುವಂತಿಲ್ಲ : ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶ

28 Mar 2021.07:47 AM

ಬೆಂಗಳೂರು : ಸರ್ಕಾರಿ ನೌಕರರ ಮಾಹಿತಿ ಕೋರಿಕೆ ವಿಚಾರದಲ್ಲಿ ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಸರ್ಕಾರಿ ನೌಕರರು ಸಿಬ್ಬಂದಿಗಳ ವೈಯಕ್ತಿಕ ದ್ವೇಷಕ್ಕೆ ಖಾಸಗಿ ಮಾಹಿತಿ ಕೇಳುವಂತಿಲ್ಲ ಎಂದು ಆದೇಶ ನೀಡಿದೆ.

ರೈತರ ಜೊತೆಗೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ದ : ನರೇಂದ್ರ ಸಿಂಗ್ ತೋಮರ್

ಖಾಸಗಿ ಮಾಹಿತಿ ಕೋರಿಕೆ ಸಂಬಂಧ ಆದೇಶ ಹೊರಡಿಸಿರುವ ಮಾಹಿತಿ ಆಯೋಗ, ಸರ್ಕಾರಿ ನೌಕರರು ಸಿಬ್ಬಂದಿಗಳ ಸ್ವವಿವರ ಹಾಗೂ ಸೇವಾ ಪುಸ್ತಕ ಖಾಸಗಿ ಮಾಹಿತಿಯಾಗಿದ್ದು,ವೈಯಕ್ತಿಕ ದ್ವೇಷಕ್ಕೆ ಖಾಸಗಿ ಮಾಹಿತಿಯನ್ನು ನೀಡಲು ಆಗುವುದಿಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗ ತಿಳಿಸಿದೆ.

ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರ ಮಾಹಿತಿ ಕೋರಿ ಕೆ.ಎಸ್.

ರವಿಕುಮಾರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಮಹಿತಿ ಆಯೋಗ ತಿರಸ್ಕರಿಸಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಖಾಸಗಿ ಮಾಹಿತಿ ಕೇಳುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags