ಬೆಂಗಳೂರು : ಪೊಲೀಸ್ ಅಧಿಕಾರಿಗಳಂತೆ, ಗಣಿ ಇಲಾಖೆಯ ಅಧಿಕಾರಿಗಳಿಗೂ ಖಾಕಿ ಸಮವಸ್ತ್ರ ಹಾಗೂ ಸ್ಟಾರ್ ನೀಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ತೀರ್ಮಾನ ಪ್ರಕಟಿಸುವುದಾಗಿ ಗಣಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದಂತ ಅವರು, ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲೂ ಗಣಿ ಅದಾಲತ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಏಪ್ರಿಲ್ 17ರಂದು ಗಣಿ ಅದಾಲತ್ ನಡೆದ್ರೇ, ಬೆಳಗಾವಿಯಲ್ಲಿ ಏಪ್ರಿಲ್ 30ರಂದು, ಮೈಸೂರಿನಲ್ಲಿ ಮೇ.15ರಂದು, ಕಲಬುರ್ಗಿಯಲ್ಲಿ ಮೇ 29ರಂದು ಹಾಗೂ ಮಂಗಳೂರಿನಲ್ಲಿ ಜೂನ್ 11ರಂದು ನಡೆಸಲಾಗುತ್ತದೆ ಎಂದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಡಿಜಿಎಂಎಸ್ ಪರವಾನಗಿ ಪಡೆಯಲು 90 ದಿನ ಕಾಲಾವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಪರವಾನಗಿ ಇರೋ ಗಣಿ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು ಮುಂದುವರೆಸಬಹುದಾಗಿದೆ. ಇದನ್ನು ತಾತ್ಕಾಲಿಕ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿರುವುದಾಗಿ ತಿಳಿದರು.
'ವಾಹನ ಸವಾರ'ರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಇವು.!
ಇದೇ ಸಂದರ್ಭದಲ್ಲಿ ತಮ್ಮ ಅಧಿಕಾರಿಗಳು, ಸಿಬ್ಬಂದಿಗಳ ಬಗ್ಗೆ ಮಾತನಾಡಿದ ಅವರು, ನಮ್ಮ ಗಣಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ, ಪೊಲೀಸ್ ಸಿಬ್ಬಂದಿಗಳಂತೆ ಖಾಗಿ ಸಮವಸ್ತ್ರ ಹಾಗೂ ಸ್ಟಾರ್ ನೀಡೋ ಚಿಂತನೆ ನಡೆಸಲಾಗಿದೆ ಎಂದರು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now