Kannada News Now

1.8M Followers

BIG NEWS : 'ತವರು ಜಿಲ್ಲೆ'ಯ 'ಉಸ್ತುವಾರಿ' ಮೇಲೆ ಕಣ್ಣಿಟ್ಟಿದ್ದ ಸಚಿವರಿಗೆ ಬಿಗ್ ಶಾಕ್ : 'ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪಟ್ಟಿ'ಗೆ ಸಿಎಂ ಬ್ರೇಕ್

02 Apr 2021.10:02 AM

ಬೆಂಗಳೂರು : ಎರಡು ವಿಧಾನಸಭಾ ಹಾಗೂ ಒಂದು ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪಟ್ಟಿ ಕೂಡ ಬಿಡುಗಡೆ ಮಾಡುವಂತ ಯೋಚನೆಯಲ್ಲಿದ್ದರು. ಇದಕ್ಕಾಗಿ ಪಟ್ಟಿ ಕೂಡ ಸಿದ್ಧಪಡಿಸಿಟ್ಟುಕೊಂಡಿದ್ದರು. ಆದ್ರೇ ಬೈಎಲೆಕ್ಷನ್ ಸಂದರ್ಭದಲ್ಲೇ ತವರು ಜಿಲ್ಲೆ ಮೇಲೆ ಕಣ್ಣಿಟ್ಟಿದ್ದವರು ಅಸಮಾಧಾನ ಹೊರ ಹಾಕುವ ಸೂಚನೆ ಹಿನ್ನಲೆಯಲ್ಲಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪಟ್ಟಿಗೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.

'ಕೊರೋನಾ ಲಸಿಕೆ' ಪಡೆದ ನಂತ್ರವೂ 'ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ'ಗೆ ಕೊರೋನಾ ಪಾಸಿಟಿವ್.!

ಅಂದುಕೊಂಡಂತೇ ಸಾಧ್ಯವಾಗಿದ್ದರೇ, ಮೂರು ದಿನಗಳ ಹಿಂದೆಯೇ ಪರಿಷ್ಕೃತ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟಗೊಳ್ಳಬೇಕಿತ್ತು.

ಆದ್ರೇ ಉಪ ಚುನಾವಣೆಯ ಇಂತಹ ಸಂದರ್ಭದಲ್ಲಿ ಗೊಂದಲಕ್ಕೆ, ಬೇಸರಕ್ಕೆ ಕಾರಣವಾಗಬಾರದು ಎನ್ನುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಪಟ್ಟಿ ಬಿಡುಗಡೆಗೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.

`CD' ಪ್ರಕರಣ : ಇಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿಗೆ `SIT' ನೋಟಿಸ್

ಇದರಿಂದಾಗಿ, ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪಟ್ಟಿಗೆ ಬ್ರೇಕ್ ಹಾಕಿರುವಂತ ಅವರು, ತವರು ಜಿಲ್ಲೆ ಮೇಲೆ ಕಣ್ಣಿಟ್ಟಿದ್ದವರಿಗೆ ಬಿಗ್ ಶಾಕ್ ನೀಡಿದ್ದಾರೆ. ಅಲ್ಲದೇ, ಬೈಎಲೆಕ್ಷನ್ ಬಳಿಕವೇ ಉಸ್ತುವಾರಿ ಪಟ್ಟಿ ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ತವರು ಜಿಲ್ಲೆ ಉಸ್ತುವಾರಿ ಕೊಡದಿರಲು ಸಿಎಂ ನಿರ್ಧಾರ ಕೂಡ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕೊರೊನಾ ಎಫೆಕ್ಟ್ : ಅಹಮದಾಬಾದ್-ಮುಂಬೈ ನಡುವಿನ `ತೇಜಸ್' ಎಕ್ಸ್ ಪ್ರೆಸ್ ಸಂಚಾರ ಸ್ಥಗಿತ

ಅಂದಹಾಗೇ, 3 ದಿನದ ಹಿಂದೆಯೇ ಜಿಲ್ಲಾ ಉಸ್ತುವಾರಿಗಳ ಪರಿಷ್ಕೃತ ಪಟ್ಟಿ ಪ್ರಕಟವಾಗಬೇಕಿತ್ತು. ಆದ್ರೇ.. ತವರು ಜಿಲ್ಲೆ ಸಿಗದಿದ್ದರೇ ಅಸಮಾಧಾನದ ಭೀತಿ ಸಿಎಂ ಯಡಿಯೂರಪ್ಪಗೆ ಉಂಟಾಗಿರುವ ಕಾರಣ, ಅಲ್ಲದೇ ಬೈಎಲೆಕ್ಷನ್ ಮೇಲೆ ಪರಿಣಾಮ ಬೀರುವ ಆತಂಕದಿಂದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags