Kannada News Now

1.8M Followers

Breaking:‌ BBMP ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ IAS ಅಧಿಕಾರಿ ʼಗೌರವ್ ಗುಪ್ತʼ

01 Apr 2021.4:15 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವ್ರು ಅಧಿಕಾರ ಸ್ವೀಕರಿಸಿದ್ದು, ಬಿಬಿಎಂಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎನ್. ಮಂಜುನಾಥ ಪ್ರಸಾದ್ ಅವ್ರು ಗೌರವ್ ಗುಪ್ತಗೆ ಅಧಿಕಾರ ಹಸ್ತಾಂತರಿಸಿದ್ರು.

ಾಧಿಕಾರ ವಹಿಸಿಕೊಂಡ ನಂತ್ರ ಮಾತನಾಡಿದ ಅವ್ರು, 'ಆಡಳಿತಗಾರನಾಗಿ ಇಷ್ಟು ದಿನ ಸೇವೆ ಸಲ್ಲಿಸಿದ್ದು ಅತ್ಯಂತ ಸಂಸತ ಹಾಗೂ ತೃಪ್ತಿ ನೀಡಿದೆ. ಇನ್ನುಮುಂದೆ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸುವ ಸುಸಂದರ್ಭ ಕೂಡಿ ಬಂದಿದೆ. ಬೆಂಗಳೂರು ಜನರಿಗೆ ಬಿಬಿಎಂಪಿಯಿಂದ ಉತ್ತಮ ಸೇವೆ ನೀಡುವುದು ನನ್ನ ಆದ್ಯ ಕರ್ತವ್ಯ ವಾಗಿದೆ' ಎಂದು ಹೇಳಿದ್ದಾರೆ.

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ `ಸಿಡಿ' ಪ್ರಕರಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ : ರಾಜ್ಯ ಬಿಜೆಪಿ ಆರೋಪ

ಅಂದ್ಹಾಗೆ, ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಗೌರವ್‌ ಗುಪ್ತ ಅವ್ರನ್ನ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಸರ್ಕಾರ ನೇಮಕ ಮಾಡಿತ್ತು.

ಸಧ್ಯ ಬಿಬಿಎಂಪಿ ಕೌನ್ಸಿಲರ್, ಮೇಯರ್ ಮತ್ತು ಉಪ ಮೇಯರ್ ಇಲ್ಲದ ಹಿನ್ನೆಲೆಯಲ್ಲಿ ಆಯುಕ್ತರೇ ಈ ಆಡಳಿತಗಳನ್ನ ನೋಡಿಕೊಳ್ಳಬೇಕಿದೆ.

ರಾಜ್ಯದಲ್ಲಿ ಇಂದಿನಿಂದ 5,500 ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ಸಚಿವ ಡಾ.ಕೆ. ಸುಧಾಕರ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags