ಗದಗ: ಸಾರಿಗೆ ನೌಕರರ ಮುಷ್ಕರದ ಮಧ್ಯೆಯೂ ಹೊಸಪೇಟೆ ಡಿಪೋಗೆ ಸೇರಿದ ಬಸ್ ಚಾಲಕ ಹಾಗೂ ನಿರ್ವಾಹಕರು ಬಸ್ ಓಡಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ವಸತಿ ಮಾಡಿದ್ದ ಬಸ್ ಬುಧವಾರ ಬೆಳಗ್ಗೆ 6.30ಕ್ಕೆ ಹೊರಟು ಗದಗ ಮಾರ್ಗವಾಗಿ ಪ್ರಯಾಣ ಬೆಳೆಸಿತು. ಹತ್ತಾರು ಪ್ರಯಾಣಿಕರನ್ನು ಗಮ್ಯ ಸ್ಥಾನಕ್ಕೆ ತಲುಪಿಸಿದರು.
ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ ಓಡಾಟ, ಪ್ರಯಾಣಿಕರ ಪರದಾಟ
ಈ ಕುರಿತು ಪ್ರತಿಕ್ರಿಯಿಸಿದ ಬಸ್ ನಿರ್ವಾಹಕ ಈರಣ್ಣ ಜವಳಿ, ಇವತ್ತಿನಿಂದ ಮುಷ್ಕರವಿದೆ. ನಾವು ನಿನ್ನೆ 2ನೇ ಶಿಫ್ಟ್ ನಲ್ಲಿ ಹೊಸಪೇಟೆ- ಹುಬ್ಬಳ್ಳಿಗೆ ಟ್ರಿಪ್ ಹೋಗಿದ್ದೆವು. ಈಗ ಹೊಸಪೇಟೆ ಮರಳುತ್ತಿದ್ದೇವೆ. ಬಸ್ ನ್ನು ಹೊಸಪೇಟೆಗೆ ತಲುಪಿಸಿ, ನಮ್ಮ ಕರ್ತವ್ಯವನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ನಾ ಕೊಡೆ, ನೀ ಬಿಡೆ : ಇಂದಿನಿಂದ ಸಾರಿಗೆ ನೌಕರರ ಮುಷ್ಕರ; ಎಸ್ಮಾ ಜಾರಿ ಎಚ್ಚರಿಕೆ
Disclaimer
This story is auto-aggregated by a computer program and has not been created or edited by Dailyhunt Publisher: Udayavani