Kannada News Now

1.8M Followers

ಮುಷ್ಕರ ನಿರತ ಸಾರಿಗೆ ನೌಕರರಿಗೆ ಸಿಹಿಸುದ್ದಿ : ಮಾರ್ಚ್ ತಿಂಗಳ ಸಂಬಳ ರಿಲೀಸ್ ಆಗುತ್ತೆ ಅಂದ KSRTC ಎಂಡಿ

07 Apr 2021.1:47 PM

ಬೆಂಗಳೂರು : ರಾಜ್ಯ ಸರ್ಕಾರದಿಂದ ಮುಷ್ಕರ ನಿರತರ ಮಾರ್ಚ್ ತಿಂಗಳ ವೇತನ ತಡೆ ಹಿಡಿಯಲು ನಿರ್ಧರಿಸಿದ್ದಾಗಿ ತಿಳಿದು ಬಂದಿತ್ತು. ಈ ಮೂಲಕ ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಗ್ ಶಾಕ್ ಕೂಡ ನೀಡಿತ್ತು. ಆದ್ರೇ ಮಾರ್ಚ್ ತಿಂಗಳ ಸಂಬಂಳ ರಿಲೀಸ್ ಆಗುತ್ತೆ, ಆದ್ರೇ ಸ್ವಲ್ಪ ಲೇಟ್ ಆಗುತ್ತದೆ ಎಂಬುದಾಗಿ ಕೆಎಸ್‌ಆರ್ ಟಿ ಸಿ ಎಂಡಿ ಶಿವಯೋಗಿ ಕಳಸದ ತಿಳಿಸುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.

BIG BREAKING NEWS : 'ಖಾಸಗಿ ಬಸ್ ಮಾಲೀಕ'ರಿಗೆ ಮತ್ತೊಂದು ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 'ಪುಲ್ ಪರ್ಮಿಟ್' ನೀಡಿ ಆದೇಶ

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರ್ಚ್ ಹಣಕಾಸು ವರ್ಷದ ಅಂತ್ಯದ ತಿಂಗಳಾಗಿದೆ. ಇದರಿಂದಾಗಿ ಸಾರಿಗೆ ನೌಕರರ ಸಂಬಂಳ ವಿಳಂಬವಾಗುವ ಸಾಧ್ಯತೆ ಇದೆ.

ಇದನ್ನು ಬಿಟ್ಟು ಮುಷ್ಕರ ನಡೆಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಮಾರ್ಚ್ ತಿಂಗಳ ವೇತನಕ್ಕೆ ತಡೆ ನೀಡುತ್ತಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

'ವರ್ಗಾವಣೆ ನಿರೀಕ್ಷೆ'ಯಲ್ಲಿರುವ ರಾಜ್ಯದ ' ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ'ರಿಗೆ ಬಹುಮುಖ್ಯ ಮಾಹಿತಿ : ಶೀಘ್ರವೇ ವರ್ಗಾವಣೆಗೆ ಕೌನ್ಸಿಲಿಂಗ್ ಆರಂಭ

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೆ ತರೋದಕ್ಕೆ ಸಾಧ್ಯವಿಲ್ಲ. ಇದನ್ನು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟ ಪಡಿಸಿದೆ. ಆ ಬಗ್ಗೆ ನಾನು ಮತ್ತೆ ಪ್ರತಿಕ್ರಿಯಿಸಲ್ಲ. ಮುಷ್ಕರ ನಿರತ ನೌಕರರಿಗೆ ಆರ್ಥಿಕ ಪರಿಸ್ಥಿತಿಯ ಮನವರಿಕೆ ಮಾಡಲಾಗುವುದು ಎಂದರು.

ಮನೆ ವಿಚಾರಕ್ಕೆ ದಯಾದಿಗಳ ನಡುವೆ ಗಲಾಟೆ : ಹೊಡೆದಾಟದಲ್ಲಿ ತಂದೆ-ಮಗ ಸಾವು







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags