Kannada News Now

1.8M Followers

Big Breaking News : ಏಪ್ರಿಲ್‌ 10ರಿಂದ 20ರ ವರೆಗೆ ರಾಜ್ಯದ 'ಈ ಜಿಲ್ಲೆಗಳಲ್ಲಿ ರಾತ್ರಿ ಕೊರೊನಾ ಕರ್ಫ್ಯೂ ಜಾರಿ' : ಸಿಎಂ ಬಿಎಸ್‌ವೈ

08 Apr 2021.9:05 PM

*ಅವಿನಾಶ್‌ ಆರ್ ಭೀಮಸಂದ್ರ

ಬೆಂಗಳೂರು: ಏಪ್ರಿಲ್‌ 10ರಿಂದ ಏಪ್ರಿಲ್ 20ರ ವರೆಗೆ ರಾಜ್ಯದ ಬೆಂಗಳೂರು ನಗರ, ಉಡುಪಿ, ಮೈಸೂರು, ಕಲಬುರಗಿ, ತುಮಕೂರು, ,ಬೀದರ್ , ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಾತ್ರಿ ಕೊರೊನಾ ಕರ್ಫ್ಯೂ ಜಾರಿ ಇರಲಿದೆ ಅಂತ ಸಿಎಂ ಬಿಎಸ್‌ವೈ ತಿಳಿಸಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 5ರ ತನಕ ಈ ನಿಯಮ ಜಾರಿಯಲ್ಲಿ ಇರಲಿದೆ ಅಂತ ಹೇಳಿದ್ರು. ಇಂದು ಪ್ರಧಾನಿ ಮೋದಿಯವರ ನೇತೃತ್ವದ ನಡೆದ ಎಲ್ಲಾ ಸಿಎಂಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಿಎಂ ಬಿಎಸ್‌ವೈ ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಅವರು ಮಾತನಾಡಿ ಅಗತ್ಯ ವಸ್ತುಗಳ ಸೇವೆಗಳು ಎಂದಿನಂತೆ ಇರಲಿದೆ ಅಂತ ಅವರು ಹೇಳಿದ್ರು.

ಇದೇ ವೇಳೆ ರಾಜ್ಯದ ಜನತೆ ಬಳಿಯಲ್ಲಿ ಕರೋನ ಹೆಚ್ಚಳದಿಂದಾಗಿ ನಾವು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ, ದಯವಿಟ್ಟು ಮಾಸ್ಕ್‌ ಹಾಕಿಕೊಳ್ಳಿ, ಅಂತರವನ್ನು ಕಾಪಾಡಿಕೊಳ್ಳಿ ಅಂತ ಹೇಳಿದ್ರು. ಇನ್ನೂ ಮುಂದಿನ ದಿನದಲ್ಲಿ ಮಾಸ್ಕ್‌ ಹಾಕದೇ ಇರುವವರಿಗೆ ಹೆಚ್ಚಿನ ದಂಡವನ್ನು ಹಾಕಲಾಗುವುದು ಅಂತ ಹೇಳಿದರು. ಈ ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಗೆ ತರಲಾಗಿದ್ದು, ಇದರಲ್ಲಿ ಉತ್ತಮ ಫಲಿತಾಂಶ ಬರದೇ ಹೋದ್ರೆ, ಮುಂದಿನ ದಿನದಲ್ಲಿ ರಾಜ್ಯದ ಉಳಿದ ಕಡೆಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು ಅಂಥ ಹೇಳಿದರು. ಮದುವೆ, ಸಭೆ ಸಮಾರಂಭಗಳನ್ನು ಇತಿ ಮಿತಿಗಳಲ್ಲಿ ಆಚರಣೆ ಮಾಡಬೇಕು ಅಂತ ಅವರು ಹೇಳಿದರು. ನಾವು ನಾಳೆಯಿಂದ ಮಾಸ್ಕ್‌ ಹಾಕಿಕೊಳ್ಳದವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು, ಯಾವುದೇ ಕಾರಣಕ್ಕೂ ಈ ಜಿಲ್ಲೆಗಳಲ್ಲಿ ಸಭೆ, ಸಮಾರಂಭಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಬಾರದು ಅಂತ ಹೇಳಿದರು. ಇನ್ನೂ ಇದಕ್ಕೆ ಜನತೆ ಕೈ ಜೋಡಿಸುವಂತೆ ಮನವಿ ಮಾಡಿಕೊಂಡರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags