Kannada News Now

1.8M Followers

BIG NEWS : ವಿವಾಹಿತ ಪುತ್ರಿಗೂ `ಅನುಕಂಪದ ನೌಕರಿ' ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

10 Apr 2021.06:11 AM

ಬೆಂಗಳೂರು : ವಿವಾಹಿತ ಪುತ್ರಿಗೂ ಅನುಕಂಪದ ನೌಕರಿ ನೀಡುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ನೀಡಿದ್ದು, ಸರ್ಕಾರಿ ನೌಕರರು ಅಕಾಲಿಕ ಮರಣಕ್ಕೀಡಾದರೆ ಅನುಕಂಪದ ನೌಕರಿಯನ್ನು ವಿವಾಹಿತ ಮಗಳಿಗೂ ನೀಡಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

BIG NEWS : ಸಾರಿಗೆ ನೌಕರರ ಮುಷ್ಕರವೇ ನಿಷೇಧ : ಕಾರ್ಮಿಕ ಇಲಾಖೆಯಿಂದ ಮಹತ್ವದ ಆದೇಶ

ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಪ್ರಕಾರ, ಅವಿವಾಹಿತರಾಗಿದ್ದರೆ ಅವರ ತಂದೆ-ತಾಯಿ ಸೂಚಿಸಿದ ಸಹೋದರ/ಸಹೋದರಿಯನ್ನು ನೇಮಕ ಮಾಡಬಹುದು. ಪೋಷಕರು ಮೃತರಾಗಿದ್ದರೆ ವಯಸ್ಸಿನ ಆಧಾರದಲ್ಲಿ ಹಿರಿಯ ಸೋದರ/ ಸೋದರಿಗೆ ನೌಕರಿ ನೀಡಬಹುದು ಎಂದು ಹೇಳಿದೆ.

IPL 2021 : ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ `RCB' ಗೆ ರೋಚಕ ಗೆಲುವು

ಮೃತ ಪುರುಷ ವಿವಾಹಿತ ನೌಕರನಾಗಿದ್ದರೆ ಆತನ ಮೇಲೆ ಅವಲಂಬಿತರಾಗಿದ್ದ ಆತನ ವಿಧವಾ ಪತ್ನಿ, ಮಗ ಮತ್ತು ಮಗಳು ನೌಕರಿಗೆ ಅರ್ಹರಾಗಿರುತ್ತಾರೆ.

ಮೃತನ ಪತ್ನಿ ನೇಮಕಾತಿಗೆ ಅರ್ಹಳಲ್ಲದಿದ್ದರೆ ಅವರು ಸೂಚಿಸಿದ ಮಗ ಅಥವಾ ಮಗಳನ್ನು ನೇಮಕಾತಿ ಮಾಡಬಹುದು. ಮಹಿಳಾ ಉದ್ಯೋಗಿ ವಿವಾಹಿತೆಯಾಗಿದ್ದು, ಮೃತಪಟ್ಟರೆ ಆಕೆಯ ಮೇಲೆ ಅವಲಂಬಿತರಾಗಿದ್ದ ಆಕೆಯ ಮಗ, ಮಗಳು ಅಥವಾ ಪತಿಯು ಅರ್ಹರಾಗಿರುತ್ತಾರೆ. ಅವಿವಾಹಿತೆಯಾಗಿದ್ದರೆ ಆಕೆಯೊಂದಿಗೆ ಸಹೋದರ ಅಥವಾ ಸಹೋದರಿ ನೌಕರಿಗೆ ಅರ್ಹರಾಗಿರುತ್ತಾರೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ : ಶೀಘ್ರವೇ `ಸೇತು ಬಂಧ' ಯೋಜನೆ ಆರಂಭ

ರಾಜ್ಯದ 8 ನಗರಗಳಲ್ಲಿ ಇಂದಿನಿಂದ `ನೈಟ್ ಕರ್ಪ್ಯೂ' : ಏನೇನಿರುತ್ತದೆ? ಏನೇನಿರುವುದಿಲ್ಲ? ಇಲ್ಲಿದೆ ಮಾಹಿತಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags