ಮೈಸೂರು: ಭಾನುವಾರ (11.04.2021) ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ -2021 (ಕೆ.ಎಸ್.ಇ. ಟ್) ಮುಂದೂಡಲಾಗಿತ್ತು. ಇದೀಗ ಅದರ ಕುರಿತು ಮತ್ತೊಂದು ಮಾಹಿತಿ ಹಂಚಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯ ಈ ಪರೀಕ್ಷೆಯನ್ನು ಸಧ್ಯದಲ್ಲಿಯೇ ನಡೆಸಲು ತೀರ್ಮಾನಿಸಿದೆ.
ಈ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ನೊಂದಾಯಿತ ಅಭ್ಯರ್ಥಿಗಳು ಈಗಾಗಲೇ ನಿಗಧಿತ ಶುಲ್ಕವನ್ನು ಪಾವತಿಸಿ , ಇಲ್ಲಿಯವರೆವಿಗೂ ಪ್ರವೇಶ ಪತ್ರವನ್ನು ಪಡೆದಿರುವುದಿಲ್ಲ . ಆದ್ದರಿಂದ , ಅಭ್ಯರ್ಥಿಗಳ ಅನುಕೂಲಕ್ಕಾಗಿ ದಿನಾಂಕ : 16.04.2021 ರಂದು ಮಧ್ಯರಾತ್ರಿ 12 ಗಂಟೆವರೆಗೆ ಪ್ರವೇಶ ಪತ್ರವನ್ನು ವೆಬ್ಸೈಟ್ನಲ್ಲ ( https://kset.uni.mysore.acin/ ) ನಲ್ಲಿ ಪಡೆಯಬಹುದು ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈಗಾಗಲೇ ಪ್ರವೇಶ ಪತ್ರವನ್ನು ಪಡೆದಿರುವ ಅಭ್ಯರ್ಥಿಗಳು , ಮತ್ತೆ ಪ್ರವೇಶವನ್ನು ಪತ್ರವನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Disclaimer
This story is auto-aggregated by a computer program and has not been created or edited by Dailyhunt Publisher: News Kannada