ದಕ್ಷಿಣ ಕನ್ನಡ : ರಾಜ್ಯದಲ್ಲಿ 8 ರಿಂದ ಪದವಿಯವರೆಗೆ ತರಗತಿಗಳು ಕೊರೋನಾ ಸೋಂಕಿನ ಮಧ್ಯೆ ಆರಂಭಗೊಂಡಿವೆ. ಆದ್ರೇ 1 ರಿಂದ 6ನೇ ತರಗತಿ ಶಾಲೆಗಳು ಯಾವಾಗ ಆರಂಭಗೊಳ್ಳಲಿವೆ ಎನ್ನುವ ಕುರಿತಂತೆ ಪ್ರತಿಕ್ರಿಯಿಸಿರುವಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆದು ಸದ್ಯದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಬಿಗ್ ನ್ಯೂಸ್ : ರಾಜ್ಯದಲ್ಲಿ ಸೋಮವಾರದಿಂದ '3 ಸಾವಿರ ಕೇಂದ್ರ'ಗಳಲ್ಲಿ 'ಕೋವಿಡ್ ಲಸಿಕೆ' - ಸಚಿವ ಡಾ.ಕೆ.ಸುಧಾಕರ್
ಈ ಕುರಿತಂತೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೊರೋನಾ ಸೋಂಕಿನ ಭೀತಿ ಇರದಿದ್ದರೇ, ಮಾರ್ಚ್.1ರಿಂದಲೇ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗಬೇಕಿತ್ತು.
ರಾಜ್ಯದಲ್ಲಿ ಇದುವರೆಗೆ 350 ಆಸುಪಾಸಿನಲ್ಲಿದ್ದಂತ ಕೊರೋನಾ ಸೋಂಕಿನ ಸಂಖ್ಯೆ ನಿನ್ನೆಯಿಂದ 600ಕ್ಕೂ ಹೆಚ್ಚು ಆಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ ಸಂದರ್ಭದಲ್ಲೂ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆಯಲಾಗಿತ್ತು. ಈಗ ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಸದ್ಯಕ್ಕೆ 1 ರಿಂದ 6ನೇ ತರಗತಿ ಆರಂಭದ ನಿರ್ಧಾರವನ್ನು ಕೈಬಿಡಲಾಗಿದೆ. ಆದ್ರೇ ಆರೋಗ್ಯ ಸಲಹಾ ಸಮಿತಿ ಒಪ್ಪಿಗೆ ಬಳಿಕವೇ ತರಗತಿ ಆರಂಭದ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now