Kannada News Now

1.8M Followers

BIGG BREAKING NEWS : ದ್ವಿತೀಯ PU ಪರೀಕ್ಷೆ ರದ್ದು, SSLC ಪರೀಕ್ಷೆ ಗ್ರೇಡ್ ಮಾದರಿಯಲ್ಲಿ ನಡೆಸಲು ನಿರ್ಧಾರ - ಸಚಿವ ಎಸ್ ಸುರೇಶ್ ಕುಮಾರ್ ಘೋಷಣೆ

04 Jun 2021.10:23 AM

ಬೆಂಗಳೂರು : ಪ್ರಥಮ ಪಿಯುಸಿ ಪರೀಕ್ಷೆಯ ಆಧಾರದ ಮೇಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡಲಾಗುತ್ತಿದೆ. ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬಹು ಆಯ್ಕೆಯ 3 ಪತ್ರಿಕೆಗಳ ರೀತಿಯಲ್ಲಿ ಮಾಡಲು ನಿರ್ಧರಿಸಲಾಗಿದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಅವರು, ಈ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯ ವಿಚಾರ ಬಹು ಚರ್ಚಿತ ವಿಚಾರ. ಕಳೆದ ವರ್ಷ ಒಂದು ಬೇರೆ ಸವಾಲನ್ನು ನಾವು ಎದುರಿಸಿದ್ದೆವು. ಆ ಸವಾಲನ್ನು ಎದುರಿಸಿ, ಎಸ್ ಎಸ್ ಎಲ್ ಸಿ, ಪಿಯುಸಿ ಬಹಳ ಯಶಸ್ವಿಯಾಗಿ ಮುಗಿಸಿದ್ವಿ. ಆದ್ರೇ ಈ ವರ್ಷ ಬಿಗಿ ಪರಿಸ್ಥಿತಿ.

ಕೋವಿಡ್ 2ನೇ ಅಲೆಯಲ್ಲಿ ಬಿಗುವಿನ ಪರಿಸ್ಥಿತಿ ಇದೆ. ಮಾಡಬೇಕೋ, ಮಾಡಬಾರದೋ ಎಂಬುದು ಎರಡು ವರ್ಗದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹಿಂದಿನ ಎಲ್ಲಾ ಶಿಕ್ಷಣ ಸಚಿವರ ಜೊತೆಗೆ ಸಮಾಲೋಚನೆ ಮಾಡಿ, ಅಭಿಪ್ರಾಯ ಸಂಗ್ರಹಿಸಿದ್ದೇನೆ ಎಂದರು.

ಕರ್ನಾಟಕದ ಕೆಲವು ಹಿರಿಯ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಅವರ ಸಲಹೆ ಪಡೆದಿದ್ದೇನೆ. ನಮ್ಮ ವಿಧಾನ ಪರಿಷತ್ ಸದಸ್ಯರ ಜೊತೆಗೆ ಮಾತನಾಡಿದ್ದೇನೆ. ರಾಜ್ಯದ ಎಲ್ಲಾ ಡಿಡಿಪಿಐ ಮೂಲಕ ಪೋಷಕರು, ಮಕ್ಕಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪೋನಿನ್ ಕಾರ್ಯಕ್ರಮದಲ್ಲಿ ಈ ಪ್ರಕ್ರಿಯೆ ನಡೆಸಲಾಗಿದೆ. ಈ ವರ್ಷ ಕೂಡ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸೋದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ. ಆದ್ರೇ ಮತ್ತೊಂದು ಬಾರಿ ಪುನರ್ ವಿಮರ್ಶೆ ಮಾಡೋದಕ್ಕೆ ಕಳೆದ ನಾಲ್ಕು ದಿನಗಳಿಂದ 3 ಸುತ್ತಿನ ಚರ್ಚೆ ಮಾಡಿದ್ದೇನೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕಾರ್ಯ ಮಾಡುತ್ತಿರುವಂತ ಕೆಲವು ಪ್ರಮುಖರೊಂದಿಗೂ ಮಾತನಾಡಿದ್ದೇನೆ. ಈ ಎಲ್ಲಾ ಹಿನ್ನಲೆಯಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಈ ನಿರ್ಧಾರ ಎಲ್ಲರನ್ನು ಸಮಾಧಾನ ಮಾಡೋದಕ್ಕೆ ಆಗೋದಿಲ್ಲ. ಯಾಕೆಂದ್ರೇ ಎರಡು ವರ್ಗದವರನ್ನು ಸಮಾಧಾನ ಮಾಡೋಕೆ ಆಗೋದಿಲ್ಲ. ಯಾವುದೇ ನಿರ್ಧಾರ ಕೈಗೊಂಡರು ಕೂಡ, ಅಸಮಾಧಾನ, ಟೀಕೆ, ಟಿಪ್ಪಣಿ ಬಹಳ ಸಹಜವಾಗಿದೆ. ಆದ್ರೂ ನಾವೆಲ್ಲಾ ಕುಳಿತುಕೊಂಡು, ಮಕ್ಕಳ ಯೋಗಕ್ಷೇಮ ಹಾಗೂ ಶೈಕ್ಷಣಿಕ ಭವಿಷ್ಯದ ದೃಷ್ಠಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ವಿಸೃತವಾದಂತ ಚರ್ಚೆ ನಡೆಸಿದ್ದೇವೆ ಎಂದರು.

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈ ಮಾಡದೇ ಇರೋದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಈ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೇ ಯಾವ ರೀತಿಯಲ್ಲಿ ಗ್ರೇಡಿಂಗ್ ಕೊಡಬಹುದು ಎನ್ನುವ ಬಗ್ಗೆ ಯೋಚಿಸಿದ್ದೇವೆ. ಕೆಲವು ರಾಜ್ಯಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸಿದ ಮೇಲೆ, ಯಾವರೀತಿ ಫಲಿತಾಂಶ ಪ್ರಕಟಿಸುತ್ತೀರಿ ಎಂಬುದಾಗಿಯೂ ಚರ್ಚಿಸಿದ್ದೇವೆ. ಯಾರು ಕೂಡ ತೆಗೆದುಕೊಳ್ಳಬಹುದಾದಂತ ಮಾನದಂಡದ ಬಗ್ಗೆ ಮುಂದೆ ಯೋಚಿಸುತ್ತೇವೆ ಎಂದಿದ್ದಾರೆ. ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ. ಆ ಎಲ್ಲಾ ಮಕ್ಕಳಿಗೆ ನಾವು ಯಾವರೀತಿ ಅಸೆಸ್ ಮಾಡಬಹುದು ಎನ್ನುವ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಗಳನ್ನು ಪ್ರಥಮ ಪಿಯುಸಿ ಪರೀಕ್ಷೆಯನ್ನು ಜಿಲ್ಲಾ ಮಟ್ಟದ ಪರೀಕ್ಷೆಯಾಗಿ ಎದುರಿಸಿದ್ದರು. ಆ ಆಧಾರದ ಮೇಲೆ ಪರೀಕ್ಷೆಯಿಲ್ಲದೇ ಈ ಬಾರಿ, ಆ ಅಂಕಗಳ ಆಧಾರದ ಮೇಲೆ ನಾವು ಒಂದಷ್ಟು ಮಾನದಂಡಗಳನ್ನು ಇಟ್ಟುಕೊಂಡು, ಪಿಯು ಇಲಾಖೆ ಅವುಗಳನ್ನು ಬಿಡುಗಡೆ ಮಾಡಲಿದೆ. ಅದರ ಆಧಾರದ ಮೇಲೆ ಗ್ರೇಡ್ ಮಾಧರಿಯಲ್ಲಿ ಪಾಸ್ ಮಾಡಲು ನಿರ್ಧರಿಸಲಾಗಿದೆ ಎಂದರು.

ಯಾವುದೇ ವಿದ್ಯಾರ್ಥಿಗಳು ಬೇಸರಗೊಳ್ಳಬಾರದು. ಯಾರಿಗಾದರೂ ನಿಮ್ಮ ಫಲಿತಾಂಶದ ಬಗ್ಗೆ ಗೊಂದಲ, ಬೇಸರ ಇದ್ದರೇ ಮಂಡಳಿಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನೀವು ಎಷ್ಟೇ ಸಿದ್ಧರಾಗಿದ್ದರೂ ಕೂಡ ನಮಗೆ ಕನಿಷ್ಠ 12 ದಿನಗಳು ಬೇಕಾಗುತ್ತದೆ. ಕೊರೋನಾ ಭೀತಿಯ ಈ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಮಾಡುತ್ತಿಲ್ಲ. ಅದು ಸೂಕ್ತ ಅಲ್ಲ ಎಂಬುದಾಗಿ ತಿಳಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆಗೆ 8.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅನೇಕ ಚಾನಲ್ ಗಳಲ್ಲಿ ಸರ್ವೆ ಮಾಡಿರೋದನನ್ನು ನೋಡಿದ್ದೇನೆ. ನಮಗೆ ಪರೀಕ್ಷೆ ಬೇಕು ಎಂಬುದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೇಳಿರೋದನ್ನು ಕೇಳಿದ್ದೇನೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳೋದು ಕಷ್ಟ ಆಗುತ್ತಿದೆ. ಸಿಬಿಎಸ್‌ಇ ಹಾಗೂ ರಾಜ್ಯ ಪರೀಕ್ಷೆಗೂ ಎರಡು ವ್ಯತ್ಯಾಸವಿದೆ. ಸಿಬಿಎಸ್‌ಇಯಲ್ಲಿ ಪಿರಿಯಾಡಿಕ್ ಪರೀಕ್ಷೆ ನಡೆಯುತ್ತದೆ. ಆದ್ರೇ ನಮ್ಮಲ್ಲಿ ಆ ವ್ಯವಸ್ಥೆ ಇಲ್ಲ. ಹೀಗಾಗಿ ಆ ಮಾನದಂತ ಇಲ್ಲದೇ ಇರೋದ್ರಿಂದ ನಾವು, ಬಹಳಷ್ಟು ಚರ್ಚೆ ಮಾಡಿ, ಸಿಎ ಕೂಡ ಸಭೆ ಕರೆದು ಮಾತುಕತೆ ನಡೆಸಿದ್ದೇವೆ. ಅದರಂತೆ ಎಸ್ ಎಸ್ ಎಲ್ ಸಿ ಪರೀಕ್ಷೆ ಎರಡು ರೀತಿಯಲ್ಲಿ ಮಾಡಲು ನಿರ್ಧರಿಸಲಾಗಿದೆ. ಒಂದು ಕೋರ್ಸ್ ಸಬ್ಜೆಕ್, ಸೈನ್, ಮ್ಯಾಥಮೇಟಿಕ್ಸ್, ಸೋಷಿಯಲ್ ಸೈನ್ಸ್ ಈ ಮೂರು ವಿಷಯಗಳ ಒಳಗೊಂಡು ಒಂದು ಪೇಪರ್ ಪರೀಕ್ಷೆ ಮಾಡಲಾಗುತ್ತದೆ. ಮಲ್ಟಿ ಚಾಯಿಸ್ ಪ್ರಶ್ನೆಗಳಿರುತ್ತದೆ. ಪ್ರತಿ ಪ್ರಶ್ನೆಗೆ 4 ರೀತಿಯ ಆಯ್ಕೆ ಇರುತ್ತದೆ. ಅವುಗಳನ್ನು ಆಯ್ಕೆ ಮಾಡಬಹುದು ಎಂದರು.

ಇನ್ನು ಎರಡನೇ ಪೇಪರ್ ಆಗಿ ಭಾಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಕೂಡ ನಾವು ಯಾರನ್ನು ಪೇಲ್ ಮಾಡೋದಕ್ಕಾಗಿ ಪರೀಕ್ಷೆ ಮಾಡುತ್ತಿಲ್ಲ. ಅವರು ಮುಂದೆ ಸೈನ್ಸ್, ಕಾಮರ್ಸ್, ಆರ್ಟ್ಸ್ ನಿಶ್ಚಯ ಮಾಡೋದಕ್ಕೆ ಅನುಕೂಲ ಆಗಲಿಕ್ಕಾಗಿ ಮಾಡಲಾಗುತ್ತಿದೆ. ಯಾರನ್ನು ನಿರಾಶೆ ಮಾಡುವಂತ ಕಾರ್ಯ ನಮ್ಮಲ್ಲಿ ನಡೆಯೋದಿಲ್ಲ. ಇಲ್ಲಿ ಕೂಯ ಎ+ ರೀತಿಯಲ್ಲಿ ಮಾಡಲಾಗುತ್ತದೆ ಎಂದರು. ಈ ಬಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದರು.

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಇಲ್ಲದೇ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಗಿತ್ತು. ಆದ್ರೇ. ಕೋವಿಡ್ ಜುಲೈ 3ನೇ ವಾರದಂದು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದಲೂ ಮಾಹಿತಿ ಪಡೆದು ನಿರ್ಧಾರ ಮಾಡಲಾಗಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಗ್ರೇಡ್ ಮಾದರಿಯಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕಿನ ನಡುವೆ ನಡೆಯುತ್ತಿರುವಂತ ಪರೀಕ್ಷೆ ಬಗ್ಗೆ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತಿದೆ. ಪರೀಕ್ಷೆಗೆ ಹಾಜರಾಗುವಂತ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್ ನೀಡಲಾಗುತ್ತದೆ. ಈ ಬಗ್ಗೆ ಸದ್ಯದಲ್ಲೇ ಮಾದರಿ ಪ್ರಶ್ನೆ ಪತ್ರಿಕೆ ಕೂಡ ಬಿಡುಗಡೆ ಮಾಡಲಾಗುತ್ತದೆ. ಯಾರನ್ನು ನಪಾಸು ಮಾಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

ಮಲ್ಟಿಪಲ್ ಚಾಯಿಸಿ ಪ್ರಶ್ನೆ ಪತ್ರಿಕೆಯಲ್ಲಿ ಮೂರು ಸಬ್ಜೆಕ್ಟ್ ಗಳಿರುತ್ತದೆ. ಪ್ರತಿ ಸಬ್ಜೆಕ್ ಗೆ 40 ಅಂಕಗಳು. 120 ಅಂಕಗಳಿಗೆ ನಡೆಯುತ್ತಿರುವಂತ ಪರೀಕ್ಷೆಗೆ ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಪ್ರಶ್ನೆ ಸರಳ, ನೇರವಾಗಿರುತ್ತದೆ. ಯಾವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದಂತ ಪ್ರಶ್ನೆಗಳನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತ ಶಿಕ್ಷಕರಿಗೆ ಲಸಿಕೆ ಹಾಕಿಸಲಾಗುತ್ತದೆ. ಊರಿಗೆ ತೆರಳಿರುವಂತ ವಿದ್ಯಾರ್ಥಿಗಳು ಅವರ ಸಮೀಪದ ಶಾಲೆಗಳಲ್ಲಿ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡಲಾಗಿದೆ. ಎಸ್ ಎಸ್ ಎಲ್ ಸಿಯ ಪರೀಕ್ಷಾ ದಿನಾಂಕವನ್ನು 20 ದಿನಗಳ ಮೊದಲೇ ಪ್ರಕಟಿಸಲಾಗುತ್ತದೆ. ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags