ನವದೆಹಲಿ: ಜೂನ್ ತಿಂಗಳು ಪ್ರಾರಂಭವಾಗಲು ಒಂದೇ ದಿನ ಬಾಕಿ ಇದ್ದು , ನಾಳೆಯಿಂದ ಅಂದ್ರೆ ಜೂನ್ 1 ರಿಂದ ಹಲವಾರು ನಿಯಮಗಳು ಬದಲಾಗಲಿವೆ, ಅದು ಸಾಮಾನ್ಯ ಜನರ ಜೇಬಿಗೆ ಪರಿಣಾಮ ಬೀರುತ್ತದೆ. ಜೂನ್ 1 ರಿಂದ ಜಾರಿಗೆ ಬರಲಿರುವ ಬದಲಾವಣೆಗಳಲ್ಲಿ ಜನರು ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವ ವಿಧಾನ, ಎಲ್ಪಿಜಿ ಸಿಲಿಂಡರ್ ದರಗಳು ಕೂಡ ಸೇರಿಕೊಂಡಿದೆ. ನೀವು ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಅಥವಾ ಸಿಂಡಿಕೇಟ್ ಬ್ಯಾಂಕಿನ ಖಾತೆದಾರರಾಗಿದ್ದರೆ, ಈ ಬ್ಯಾಂಕುಗಳ ಸೇವೆಗಳಲ್ಲಿ ಜೂನ್ 1 ರಿಂದ ಗಮನಾರ್ಹ ಬದಲಾವಣೆಗಳು ಕಂಡುಬರುತ್ತವೆ. ಅಲ್ಲದೆ, ಕೆಲವು ಬ್ಯಾಂಕುಗಳ ಐಎಫ್ಎಸ್ಸಿ ಕೋಡ್ ಅನ್ನು ಜೂನ್ 1 ರಿಂದ ಬದಲಾವಣೆಯಾಗಲಿದೆ.
ಜೂನ್ 1 ರಿಂದ ಜಾರಿಗೆ ಬರಲಿರುವ ಬದಲಾವಣೆಗಳ ಪಟ್ಟಿ ಇಲ್ಲಿದೆ.
ಸಿಟಿಎಸ್ ಕ್ಲಿಯರಿಂಗ್ನಲ್ಲಿ ಪ್ರಸ್ತುತಪಡಿಸುವ ಸಮಯದಲ್ಲಿ ಬ್ಯಾಂಕ್ ಗ್ರಾಹಕರನ್ನು ಸಂಪರ್ಕಿಸದೆ ಹೆಚ್ಚಿನ ಮೌಲ್ಯದ ಚೆಕ್ಗಳನ್ನು ರವಾನಿಸಲು ಅನುಕೂಲವಾಗುವಂತೆ ಫಲಾನುಭವಿಗಳಿಗೆ ನೀಡಲಾದ ಚೆಕ್ಗಳ ಬಗ್ಗೆ ನಮಗೆ ಮುಂಗಡ ಮಾಹಿತಿ ನೀಡುವಂತೆ ಗ್ರಾಹಕರನ್ನು ಕೋರಲಾಗಿದೆ 'ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ , ಗ್ರಾಹಕರು ಪ್ರಕ್ರಿಯೆಗೊಳಿಸಬೇಕಾದ ಮೊತ್ತವು 2 ಲಕ್ಷ ರೂ.ಗಿಂತ ಹೆಚ್ಚಿರುವಾಗ ಮಾತ್ರ ಚೆಕ್ ವಿವರಗಳ ಪುನರ್ ಧೃಡೀಕರಣವನ್ನು ಮಾಡಬೇಕಾಗುತ್ತದೆ.
ಎಲ್ಪಿಜಿ ಸಿಲಿಂಡರ್ ಬೆಲೆಗಳು: ತೈಲ ಕಂಪನಿಗಳು ಪ್ರತಿ ತಿಂಗಳು 1 ಮತ್ತು 15 ರಂದು ಎಲ್ಪಿಜಿ ದರವನ್ನು ಬದಲಾವಣೆ ಮಾಡುತ್ತವೆ. ಪ್ರಸ್ತುತ, ದೆಹಲಿಯಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆ 809 ರೂ. 14.2 ಕೆಜಿ ಸಿಲಿಂಡರ್ಗಳ ಜೊತೆಗೆ 19 ಕೆಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನೂ ಬದಲಾಯಿಸಬಹುದು.
ಆದಾಯ ತೆರಿಗೆ ಇಲಾಖೆಯ ಹೊಸ ವೆಬ್ಸೈಟ್: ಆದಾಯ ತೆರಿಗೆ ಇಲಾಖೆ ಜೂನ್ 7 ರಿಂದ ಐಟಿಆರ್ನ ಹೊಸ ವೆಬ್ಸೈಟ್ ಅನ್ನು ಪ್ರಾರಂಭಿಸಲಿದೆ. ಜೂನ್ 1 ರಿಂದ 6 ರವರೆಗೆ ಪ್ರಸ್ತುತ ವೆಬ್ಸೈಟ್ ಐಟಿಆರ್ ಸಂಬಂಧಿತ ಯಾವುದೇ ಕೆಲಸವನ್ನು ನಿರ್ವಹಿಸುವುದಿಲ್ಲ. ಹಳೆಯ ವೆಬ್ಸೈಟ್ www.incometaxindiaefiling.gov.in ಅನ್ನು ಈಗ www.incometaxgov.in ಬಳಸಿ ಹುಡುಕಲಾಗುತ್ತದೆ. ಐಟಿ ಇಲಾಖೆಯ ಪ್ರಕಾರ, ಜೂನ್ 1 ರಿಂದ 6 ರವರೆಗೆ ಇ-ಫೈಲಿಂಗ್ ಸೇವೆ ಕಾರ್ಯನಿರ್ವಹಿಸುವುದಿಲ್ಲ.
ಗೋಲ್ಡ್ ಜ್ಯುವೆಲ್ಲರಿ ಹಾಲ್ಮಾರ್ಕಿಂಗ್ : ಚಿನ್ನದ ಆಭರಣ ಹಾಲ್ಮಾರ್ಕಿಂಗ್ ಇನ್ನು ಮುಂದೆ ಜೂನ್ 1 ರಿಂದ ಜಾರಿಗೆ ಬರುವುದಿಲ್ಲ. ಆಭರಣಕಾರರ ಬೇಡಿಕೆಯ ಮೇರೆಗೆ ಇದನ್ನು ಜೂನ್ 15 ರವರೆಗೆ ಮುಂದೂಡಲಾಗಿದೆ. ಸರ್ಕಾರವು ಒಂದು ಸಮಿತಿಯನ್ನು ರಚಿಸಿದೆ, ಇದರ ಅಧ್ಯಕ್ಷತೆಯನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನ ಮಹಾನಿರ್ದೇಶಕ ಪ್ರಮೋದ್ ತಿವಾರಿ ವಹಿಸಲಿದ್ದಾರೆ. ಈ ಸಮಿತಿಯು ಚಿನ್ನದ ಆಭರಣ ಹಾಲ್ಮಾರ್ಕಿಂಗ್ ನಿಯಮಗಳನ್ನು ಅನುಷ್ಠಾನಗೊಳಿಸುವಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದರ ನಂತರ ಜೂನ್ 15 ರಿಂದ ರಾಷ್ಟ್ರವ್ಯಾಪಿ ಇದನ್ನು ಜಾರಿಗೆ ತರಲಾಗುವುದು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now