ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಜೂನ್ 7ರವರೆಗೆ ಜಾರಿಗೊಳಿಸಿರುವಂತ ಮಾರ್ಗಸೂಚಿ ಕ್ರಮಗಳು, ಮತ್ತೆ ಒಂದು ವಾರ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ಗಾಗಿ ಮತ್ತೆ ಬಹುತೇಕ ಲಾಕ್ ಡೌನ್ ಫಿಕ್ಸ್ ಎಂಬಂತೆ ಆಗಿದೆ.
ಜೂನ್ 7ರ ನಂತ್ರ ಲಾಕ್ ಡೌನ್ ಮುಗಿಯುತ್ತಾ ಅಥವಾ ಇರುತ್ತಾ ಎನ್ನುವ ಬಗ್ಗೆ ಪ್ರತಿಕ್ರಿಯಿಸಿರುವಂತ ಸಿಎಂ ಯಡಿಯೂರಪ್ಪ, ಇಂದಿನ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸದ್ಯದಲ್ಲೇ ತಜ್ಞರೊಂದಿಗೆ ಸಭೆ ನಡೆಸಲಾಗುತ್ತದೆ.
BREAKING : ಉ. ಪ್ರದೇಶದ ಗೊಂಡ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ : 7 ಮಂದಿ ದಾರುಣ ಸಾವು
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ರಾಜ್ಯದಲ್ಲಿ ಹಳ್ಳಿಗಳಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಬಂದಿಲ್ಲ. ಇದರಿಂದಾಗಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಸ್ತರಣೆಯ ತುರ್ತು ಅನಿವಾರ್ಯತೆ ಸರ್ಕಾರದ ಮುಂದಿದೆ. ಮುಂದಿನ ಎರಡು ದಿನಗಳಲ್ಲಿ ಮತ್ತೊಮ್ಮೆ ತಜ್ಞರೊಂದಿಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ. ಆದ್ರೇ.. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಲಾಡ್ ಕೌನ್ ಮತ್ತಷ್ಟು ಕಠಿಣವಾಗಿ ಜಾರಿಗೊಳಿಸಲಾಗುತ್ತದೆ ಎಂಬುದಾಗಿ ಹೇಳುವ ಮೂಲಕ, ಲಾಕ್ ಡೌನ್ ವಿಸ್ತರಣೆ ಮತ್ತೆ ಫಿಕ್ಸ್ ಎಂಬ ಸುಳಿವು ನೀಡಿದ್ದಾರೆ.
ಬಡ ರಾಷ್ಟ್ರಗಳಿಗೆ ತುರ್ತು ಬಳಕೆಗೆ ಚೀನಾದ ಸಿನೋವಾಕ್ ಲಸಿಕೆ ಅಂಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now