Kannada News Now

1.8M Followers

BIG NEWS : ಜೂನ್ 30 ರೊಳಗೆ `ಆಧಾರ್-ಪಾನ್' ಲಿಂಕ್ ಮಾಡದ ನೌಕರರಿಗೆ ಸಂಬಳ ಇಲ್ಲ!

23 Jun 2021.06:27 AM

ನವದೆಹಲಿ : ಕೇಂದ್ರ ಸರ್ಕಾರವು ಆಧಾರ್-ಪಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಜೂನ್ 30 ರ ಗಡುವು ನೀಡಿದ್ದು, ಆಧಾರ್-ಪಾನ್ ಜೋಡಣೆ ಮಾಡದವರಿಗೆ ಸಂಬಳ ಸಿಗದಂತೆ ಮಾಡಲು ಹೊರಟಿದೆ.

ಅನ್ ಲಾಕ್ 2.0 : ರಾಜ್ಯದ ಈ 4 ಜಿಲ್ಲೆಗಳಿಗೆ ಅರ್ಧ ರಿಲೀಫ್

ಜೂನ್ 30 ರೊಳಗೆ ನೌಕರರ ಆಧಾರ್-ಪಾನ್ ಲಿಂಕ್ ಆಗಬೇಕು. ಆ ಪ್ರಕ್ರಿಯೆ ಪೂರ್ಣಗೊಳಿಸಲು ನೌಕರ ವಿಫಲನಾದರೆ, ಆತನಿಗೆ ಮುಂದಿನ ತಿಂಗಳು ವೇತನ ಕೊಡಬೇಡಿ ಎಂದು ಕಂಪನಿಗಳಿಗೆ ಆದಾಯ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ.

BIG NEWS : ರಾಜ್ಯ ಸರ್ಕಾರಕ್ಕೆ ಡಾ.ದೇವಿಶೆಟ್ಟಿ ನೇತೃತ್ವದ ಸಮಿತಿ ವರದಿ ಸಲ್ಲಿಕೆ : ಶೀಘ್ರವೇ ಕಾಲೇಜು ಆರಂಭ!

ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ಹಾಗೂ 10 ಅಂಕಿಗಳ ಪಾನ್ ಲಿಂಕ್ ಮಾಡುವುದಕ್ಕೆ ಹಲವು ಬಾರಿ ಗಡುವು ನೀಡಿದರೂ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಜೂನ್ 30 ರೊಳಗೆ ಆಧಾರ್-ಪಾನ್ ಜೋಡಣೆ ಮಾಡದಿದ್ದರೆ, ಪ್ಯಾನ್ ಸಂಖ್ಯೆ ನಿಷ್ಕ್ರಿಯವಾಗುತ್ತದೆ ಎಂದು ಆದಾಯ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಸಿಹಿಸುದ್ದಿ : 25 ಲಕ್ಷ ಗ್ರಾಮೀಣ ಮನೆಗಳಿಗೆ 'ನಲ್ಲಿ ನೀರಿನ ಸಂಪರ್ಕ'

ʼಡೆಲ್ಟಾ ಪ್ಲಸ್ ರೂಪಾಂತರಿʼ ಪ್ರಕರಣಗಳನ್ನ ಕಟ್ಟುನಿಟ್ಟಾಗಿ ಪ್ರತ್ಯೇಕಿಸಿ: ಕೇಂದ್ರ ಸರ್ಕಾರದಿಂದ ಈ ʼ3 ರಾಜ್ಯʼಗಳಿಗೆ ಸೂಚನೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags