ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ. ಸರ್ಕಾರಿ ನೌಕರರನ್ನು ರಾಷ್ಟ್ರೀಯ ಪಿಂಚಣಿ -NPS ಬದಲಾಗಿ ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸಲು ಆದೇಶಿಸಲಾಗಿದೆ. 2006 ರ ಏಪ್ರಿಲ್ 1 ಕ್ಕಿಂತ ಮೊದಲು ನೇಮಕವಾದವರಿಗೆ ಅನ್ವಯವಾಗಲಿದೆ.
2006 ರ ಏಪ್ರಿಲ್ 1 ಕ್ಕಿಂತ ಮೊದಲು ಆಯ್ಕೆ ಪ್ರಕ್ರಿಯೆ ನಡೆದು, ನೇಮಕಾತಿಯಾಗಿ ಕಾರಣಾಂತರದಿಂದ ಈ ದಿನಾಂಕದ ಬಳಿಕ ಸೇವೆಗೆ ಹಾಜರಾದ ನೌಕರರಿಗೆ NPS ಬದಲಾಗಿ ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವಂತೆ ತಿಳಿಸಲಾಗಿದೆ.
ಹಳೆಯ ಪಿಂಚಣಿ ಯೋಜನೆಗೆ ಒಳಪಡುವ ನೌಕರರು ನಿಯಮಾನುಸಾರ ರಾಷ್ಟ್ರೀಯ ಪಿಂಚಣಿಯಡಿ ಕ್ರೋಡೀಕರಿಸಿದ್ದ ಸಂಪೂರ್ಣ ವಂತಿಗೆ ಮತ್ತು ವಂತಿಗೆ ಮೇಲಿನ ಬಡ್ಡಿ ಆದಾಯವನ್ನು ಸರ್ಕಾರಕ್ಕೆ ಮರಳಿಸಬೇಕು ಎಂದು ಹೇಳಲಾಗಿದೆ.
2006 ಕ್ಕಿಂತ ಮೊದಲು ನೇಮಕವಾದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಯಲ್ಲಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada Dunia