ಬೆಂಗಳೂರು : ಸಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿ ನೀಡಿದ್ದು, ಸಿಇಟಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳಿಗೆ 8 ಕೃಪಾಂಕ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ನಾಡಿನ ಜನತೆಗೆ 'ಗೌರಿ-ಗಣೇಶ' ಹಬ್ಬದ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ
ಅಗಸ್ಟ್ 28 ರಿಂದ 30 ರವರೆಗೆ ನಡೆದಿದ್ದ ಸಿಇಟಿ ಪರೀಕ್ಷೆಯನ್ನು 2,01,834 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಸೆ. 20 ರಂದು ಫಲಿತಾಂಶ ಪ್ರಕಟವಾಗಲಿದೆ. ಗಣಿತದಲ್ಲಿ 2 ಕೃಪಾಂಕ ಹಾಗೂ ಎ ಶ್ರೇಣಿ ಪ್ರಶ್ನೆ 21 ಮತ್ತು 37 ಕ್ಕೆ ಉತ್ತರಗಳ ಗೊಂದಲ ಇದೆ. ಜೀವಶಾಸ್ತ್ರದಲ್ಲಿ ಎ1 ಶ್ರೇಣಿಯ 40 ನೇ ಪ್ರಶ್ನೆ ಬಿ ಮತ್ತು ಡಿ ಆಯ್ಕೆಗಳೆರಡೂ ಸರಿ ಇದೆ.
Kisan Credit Card : ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ
ಈ ರೀತಿ ಸ್ವಯಂ ಘೋಷಿತವಾಗಿ ಕೆಇಎ 4 ದೋಷಗಳನ್ನು ಕಂಡು ಹಿಡಿದು ಅದಕ್ಕೆ ಕೃಪಾಂಕ ಘೋಷಣೆ ಮಾಡಿದೆ. ಸದ್ಯ ಘೋಷಣೆ ಮಾಡಿರುವ 4 ಹಾಗೂ ಮಾಡಬೇಕಿರುವ 4 ಸೇರಿ ಒಟ್ಟಾರೆ 8 ಕೃಪಾಂಕ ವಿದ್ಯಾರ್ಥಿಗಳ ಖಾತೆಗೆ ಜಮೆ ಆಗಲಿದೆ ಎನ್ನಲಾಗಿದೆ.
ಆದಾಯ ತೆರಿದಾರರಿಗೆ ಬಿಗ್ ರಿಲೀಫ್ : ʼತೆರಿಗೆ ರಿಟರ್ನ್ಸ್ʼ ಸಲ್ಲಿಸಲು ಅವಧಿ ವಿಸ್ತರಣೆ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now