ಬೆಂಗಳೂರು: ಇದೇ ಆಗಸ್ಟ್/ಸೆಪ್ಟೆಂಬರ್ ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೋಮವಾರ ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 18,413 ವಿದ್ಯಾರ್ಥಿಗಳಲ್ಲಿ 5,507 ( ಶೇಕಡ 29.91) ತೇರ್ಗಡೆಯಾಗಿದ್ದಾರೆ.
ಒಟ್ಟು ವಿದ್ಯಾರ್ಥಿಗಳ ಪೈಕಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ.36.72ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕರು ಶೇ.26.06ರಷ್ಟು ತೇರ್ಗಡೆಯಾಗಿದ್ದಾರೆ.
ಚಾಲೆಂಜ್ ಗೆಲ್ಲದವರು
ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರ ಪಾಸ್ ಮಾಡಿತ್ತು.
ಪರೀಕ್ಷೆ ಬರೆದ ಒಟ್ಟು 592 ಹೊಸಬರಲ್ಲಿ 556 ತೇರ್ಗಡೆ (93.92%) ಹೊಂದಿದ್ದು, 36 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಪುನರಾವರ್ತಿತ 351 ರಲ್ಲಿ 183 ಪಾಸ್ (52.29%), 168. ಫೇಲ್, ಖಾಸಗಿ 17,470 ರಲ್ಲಿ 4,768 ಉತ್ತೀರ್ಣ (27.29%), 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ.70.83, ವಾಣಿಜ್ಯ- ಶೇ.24.98, ಕಲೆ ವಿಭಾಗದಲ್ಲಿ ಶೇ.32.06 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ತೇರ್ಗಡೆಯಾದವರಲ್ಲಿ ಗ್ರಾಮೀಣ ಶೇ.32.59, ನಗರ ಶೇ.28.62ರಷ್ಟು ವಿದ್ಯಾರ್ಥಿಗಳಿದ್ದಾರೆ.
ಅತ್ಯಧಿಕ ಅಂಕ ಗಳಿಕೆ
ಒಟ್ಟು 600ಕ್ಕೆ ಸೈನ್ಸ್- 573, ವಾಣಿಜ್ಯ- 594 ಮತ್ತು ಕಲೆ- 592. ಸ್ಕ್ಯಾನಿಂಗ್ ಪ್ರತಿ ಪಡೆಯಲು 530. ರೂ, ಮರು ಮೌಲ್ಯಮಾಪನಕ್ಕೆ 1,670 ರೂ ಶುಲ್ಕ ನಿಗದಿಪಡಿಸಿದ್ದು, 5-10-2021ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿ.ಸಿ.ನಾಗೇಶ್ ವಿವರಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಪಿಯು ಮಂಡಳಿ ನಿರ್ದೇಶಕಿ ಆರ್.ಸ್ನೇಹಲ್ ಇದ್ದರು.
ಗಣೇಶನ ವಿಸರ್ಜನೆ ವೇಳೆ ಭಾರಿ ದುರಂತ: ಹಸುಗೂಸು ಸೇರಿ 10 ಮಕ್ಕಳು ನೀರು ಪಾಲು!
ಪತ್ನಿ, ಮೂವರು ಮಕ್ಕಳು, ಮೊಮ್ಮಗುವಿನ ಸಾವಿಗೆ ಕಾರಣವಾದ್ರಾ ಈ ಸಂಪಾದಕ? ಡೆತ್ನೋಟ್ನಲ್ಲಿ ಸಿಕ್ಕಿವೆ ಮಹತ್ವದ ಸುಳಿವು!
Disclaimer
This story is auto-aggregated by a computer program and has not been created or edited by Dailyhunt Publisher: Vijayvani