Zee News ಕನ್ನಡ

351k Followers

Karnataka HC : ಪದವಿ ಕೋರ್ಸ್‌ಗಳಲ್ಲಿ ಕನ್ನಡ ಭಾಷೆ ಕಡ್ಡಾಯ ವಿಷಯ : ಹೈಕೋರ್ಟ್ ಆದೇಶ

08 Oct 2021.00:06 AM

ಬೆಂಗಳೂರು : ಪದವಿ ಕೋರ್ಸ್‌ಗೆ ದಾಖಲಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ವಿಷಯವನ್ನಾಗಿ ಅಧ್ಯನ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

"ಇದು ಸೂಕ್ಷ್ಮ ವಿಚಾರ" ಎಂದು ಗಮನಿಸಿದ ಕರ್ನಾಟಕ ಉಚ್ಚ ನ್ಯಾಯಾಲಯವು( Karnataka High Court) ಇಂದು ಎರಡು ಸರ್ಕಾರಿ ಆದೇಶಗಳ ಕಾರ್ಯಾಚರಣೆಯನ್ನು ತಡೆಹಿಡಿಯಲು ಕೋರಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಮಧ್ಯಂತರ ಪರಿಹಾರಕ್ಕಾಗಿ ಪ್ರಾರ್ಥನೆಯನ್ನು ಪರಿಗಣಿಸುವುದಾಗಿ ಹೇಳಿದೆ.

ಇದನ್ನೂ ಓದಿ : By-election: ಸಿಂದಗಿ, ಹಾನಗಲ್ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ವಿಭಾಗೀಯ ಪೀಠವು "ರಾಜ್ಯ ಸರ್ಕಾರ(Karnataka Government)ದ ಪರವಾಗಿ ಹಾಜರಾದ ವಕೀಲ ಶ್ರೀನಿಧಿ ನಾಳೆ ಈ ವಿಷಯವನ್ನು ಪಟ್ಟಿ ಮಾಡಲು ಆದೇಶಿಸಿದ್ದಾರೆ, ಅಲ್ಲದೆ ಈ ಆದೇಶದ ಮೂಲಕ ಅನುಮತಿಸಲಾಗಿದೆ. ಮಧ್ಯಂತರ ಪರಿಹಾರವನ್ನು ಪರಿಗಣಿಸಲು ನಾಳೆ ವಿಷಯವನ್ನು ಪಟ್ಟಿ ಮಾಡಿ" ಎಂದು ಹೇಳಿದೆ.

ಅರ್ಜಿದಾರರ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್(Samskrita Bharati Karnataka Trust) ಮಧ್ಯಂತರ ಪರಿಹಾರದ ಮೂಲಕ 7/08/2021 ಮತ್ತು 15/09/2021 ದಿನಾಂಕದ ಎರಡು ಆದೇಶಗಳ ಕಾರ್ಯಾಚರಣೆಯನ್ನು ತಡೆಹಿಡಿಯಲು ಕೋರಿದೆ, ಕನ್ನಡವನ್ನು ಪದವಿಯಲ್ಲಿ ಕಡ್ಡಾಯ ವಿಷಯವನ್ನಾಗಿ ಮಾಡಿದ್ದು, ಮಾರ್ಗಸೂಚಿಗಳೊಂದಿಗೆ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್ "ಇದು ಸುಮಾರು 1,32,000 ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ." ಅವರು "ವಿದ್ಯಾರ್ಥಿ(Student) ದೆಹಲಿಯಿಂದ ಬಂದರೆ, ಅವನು ಕನ್ನಡವನ್ನು ಅಧ್ಯಯನ ಮಾಡಿಲ್ಲ, ಬಿಎ ಕೋರ್ಸ್ ಅಧ್ಯಯನ ಮಾಡಲು ಇಲ್ಲಿಗೆ ಬಂದರೆ, ಅವನು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಅದನ್ನು ಕಾರ್ಯಗತಗೊಳಿಸುವುದು ಕಷ್ಟ ಎಂದು ವಾದಿಸಿದರು.

ಇದನ್ನೂ ಓದಿ : Mysuru Dasara: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ

ಈ ನೀತಿಯನ್ನು ಯಾವಾಗ ಜಾರಿಗೆ ತರಲಾಗುವುದು ಎಂದು ನ್ಯಾಯಾಲಯವು ಮಾಡಿದ ಪ್ರಶ್ನೆಯಲ್ಲಿ, ಉತ್ತರಿಸಿದ ಅವರು, ಈ ನೀತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷ(Academic Year)ದಿಂದ ಜಾರಿಗೆ ಬರುತ್ತದೆ, ಅಂದರೆ ಮುಂದಿನ ತಿಂಗಳಿನಿಂದ ಎಂದರು. ಇಫಾಕ್ಕೆ ಪ್ರತಿಯಾಗಿ ವಾದ ಮಾಡಿದ ಅರ್ಜಿದಾರರ ವಕೀಲ, "ಈ ನೀತಿಯಿಂದ ಶಿಕ್ಷಕರ ಮೇಲೆ ಕೂಡ ಪರಿಣಾಮ ಬೀರಲಿದೆ. ಹಲವು ಕಾಲೇಜುಗಳು ಉರ್ದು, ಹಿಂದಿ, ಸಂಸ್ಕೃತ ಮತ್ತು ತೆಲುಗಿನಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತವೆ. ಇದನ್ನು ಕಡ್ಡಾಯಗೊಳಿಸಿದರೆ ಯಾವುದೇ ವಿದ್ಯಾರ್ಥಿಗಳು ಆ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಸ್ವಾಭಾವಿಕವಾಗಿ, ಶಿಕ್ಷಕರ ಮೇಲೆ ಪರಿಣಾಮ ಬೀರುತ್ತದೆ. ಅವರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳಬಹುದು ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

/strong>

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags