ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಕಸ್ತೂರ ಬಾ ಶಾಲೆಯ ಮುಖ್ಯ ಶಿಕ್ಷಕ ಟಿ.ಶ್ರೀಧರ್, ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಶಾಲೆಯ ಕೊಠಡಿಯೊಂದರಲ್ಲಿ ಆಚರಿಸಿಕೊಂಡಿರುವುದು ಈಗ ವಿವಾದಕಕ್ಕೆ ಕಾರಣವಾಗಿದೆ.
ದಂಪತಿಯು ಕೇಕ್ ಕಟ್ ಮಾಡಿ ಸಂಭ್ರಮ ಪಡುತ್ತಿರುವ ಫೋಟೋ-ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಶಿಕ್ಷಕ ಟಿ.ಶ್ರೀಧರ್, ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಹೆಂಡ್ತಿ ಹಾಗೂ ಬಂಧು ಬಳಗದವರ ಜೊತೆಗೆ ಆಚರಣೆ ಮಾಡಿಕೊಂಡಿರುವುದರ ವಿರುದ್ದ ಆಕ್ರೋಶ ಕೇಳಿ ಬಂದಿದ್ದು, ಇದೂ ಮಾವನ ಮನೆಯೋ? ಶಾಲೆಯೋ? ಅಂತ ಪ್ರಶ್ನೆ ಮಾಡುತ್ತಿದ್ದು, ಮುಂದೆ ಒಂದು ದಿನ ಶಾಲೆಯನ್ನು ಬೆಡ್ರೂಮ್ ಆಗಿ ಶಿಕ್ಷಕ ಟಿ.ಶ್ರೀಧರ್ ಮಾಡಿಕೊಂಡರೇ ಗತಿ ಏನು ಅಂತ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಶಿಕ್ಷಕ ಟಿ.ಶ್ರೀಧರ್ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಸ್ಥಳೀಯ ಜನತೆ ಒತ್ತಾಯ ಮಾಡುತ್ತಿದ್ದಾರೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now