Kannada News Now

1.8M Followers

BIG BREAKING NEWS: ಡಿಸೆಂಬರ್‌ 31ಕ್ಕೆ ಕರ್ನಾಟಕ ಬಂದ್‌, ಕನ್ನಡ ಪರ ಸಂಘಟನೆಯಿಂದ ಅಧಿಕೃತ ಘೋಷಣೆ

22 Dec 2021.12:38 PM

ಬೆಂಗಳೂರು: ಡಿಸೆಂಬರ್‌ 31ಕ್ಕೆ ಕರ್ನಾಟಕ ಬಂದ್‌ ಮಾಡಲಾಗುವುದು ಅಂತ ವಾಟಾಳ್‌ ನಾಗಾರಾಜ್‌ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು. ಅಂದು ಬೆಳಗ್ಗೆ 6ರಿಂದ ಸಂಜೆ 6ರ ತನಕ ಬಂದ್ ಇರಲಿದೆ ಅಂತ ಹೇಳಿದರು.

ಈ ಮೂಲಕ ಎಂಇಎಸ್‌ ಬ್ಯಾನ್‌ ಮಾಡುವಂತೆ ರಾಜ್ಯ ಸರ್ಕಾರವನ್ನು ಮನವಿ ಮಾಡಿಕೊಂಡಿದೆ.

ಈ ಮೂಲಕ ರಾಜ್ಯದ ಜನತೆ ಬಳಿ ಮನವಿ ಮಾಡಿಕೊಂಡಿದ್ದು, ಎಲ್ಲರೂ ಕೂಡ ಬಂದ್‌ಗೆ ಬೆಂಬಲ ನೀಡುವಂತೆ ಅವರು ಹೇಳಿದರು. ಕನ್ನಡ ನಾಡಿನದಲ್ಲಿ ಬೇರೆಯವರ ಆಟ ನಡೆಯೋದಿಲ್ಲ ಅಂಥ ಹೇಳಿದರು. ಇನ್ನೂ ಕನ್ನಡ ಪರ ಸಂಘಟನೆಗಳು ನೀಡಿರುವ ಈ ಬಂದ್‌ಗೆ ಸರಿ ಸುಮಾರು 35ಕ್ಕೂ ಅಧಿಕ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲಾಗುವುದು ಅಂತ ಹೇಳಿದ ವಾಟಳ್ ನಾಗರಾಜ್‌ ಅವರು ಎಂಇಎಸ್‌ ಬ್ಯಾನ್‌ ಮಾಡುವಲ್ಲಿ ಸಿಎಂ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದರು. ಅಂದು ಅಗತ್ಯವಾದ ಕೆಲಸಗಳನ್ನು ಹೊರತು ಪಡಿಸಿ ಬೇರೆ ಸೇವೆಗಳನ್ನು ನಡೆಸಲು ಅವಕಾಶ ಇರೋದಿಲ್ಲ ಅಂತ ಹೇಳಿದರು. ಇದು ಕನ್ನಡ ನಾಡಿನ ಅಸ್ತಿತ್ವದ ಪ್ರಶ್ನೆಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಕೈ ಜೋಡಿಸಿ ಅಂತ ವಾಟಾಳ್‌ ನಾಗರಾಜ್‌ ಅವರು ಮನವಿ ಮಾಡಿದರು.

ಬಂದ್‌ಗೆ ಎಲ್ಲರೂ ಸಿದ್ದರಾಗಿದ್ದು, ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬಂದ್‌ ಮಾಡುವಂತೆ ಅವರು ಮನವಿ ಮಾಡಿದರು. ಇನ್ನೂ ರಾಜ್ಯ ಸರ್ಕಾರ ಡಿಸೆಂಬರ್‌ 29ರೊಳಗೆ ಎಂಇಎಸ್‌ ಸಂಘಟನೆಯನ್ನು ಬ್ಯಾನ್‌ ಮಾಡದೇ ಇದ್ದಲ್ಲಿ ಡಿಸೆಂಬರ್‌ 31ರಂದು ಕರ್ನಾಟಕ ಬಂದ್‌ ಮಾಡಲಾಗುವುದು ಅಂಥ ಅವರು ಹೇಳಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags