Kannada News Now

1.8M Followers

BIGG NEWS : ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಪಿಯು ಉಪನ್ಯಾಸಕರಿಗೆ ಸಿಹಿಸುದ್ದಿ : `ಶಿಕ್ಷಕರ ವರ್ಗಾವಣೆ ವಿಧೇಯಕ' ಅಂಗೀಕಾರ

23 Dec 2021.05:53 AM

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಜೊತೆಗೆ ಪದವಿ ಪೂರ್ವಕಾಲೇಜುಗಳ ಉಪನ್ಯಾಸಕರನ್ನು ವರ್ಗಾವಣೆ ಕಾಯಿದೆ ವ್ಯಾಪ್ತಿಗೆ ತರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2021 ಗೆ ವಿಧಾನಸಭೆ ಅಂಗೀಕಾರ ನೀಡಿದೆ.

ವಾರಣಾಸಿ ಪ್ರಧಾನಿ ಮೋದಿ ಭೇಟಿ : 2000 ಕೋಟಿ ಮೌಲ್ಯದ ಬಹು ಯೋಜನೆಗಳಿಗೆ ಚಾಲನೆ

ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, 2020ರಲ್ಲಿ ಕಾಯಿದೆಗೆ ಮೊದಲು ತಿದ್ದುಪಡಿ ತಂದಾಗ ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಸೇರಿಸಿರಲಿಲ್ಲ. ಇದೀಗ ಸೇರ್ಪಡೆಗೊಳಿಸಲಾಗುತ್ತಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 50 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ವರ್ಗಾವಣೆ ಮಾಡುವಾಗ ಗರ್ಭಿಣಿಯರು ಹಾಗೂ ಮಾರಣಾಂತಿಕ ಕಾಯಿದೆಯಿಂದ ಬಳಲುತ್ತಿರುವವರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಈ ತಿದ್ದುಪಡಿಯಿಂದ ಉಪನ್ಯಾಸಕರಿಗೂ ಅನುಕೂಲವಾಗಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಬೆಳಕು ಯೋಜನೆ : ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ : ಮನೆಗಳಿಗೆ ಗುರುತಿನ ಚೀಟಿ ಮೂಲಕ ವಿದ್ಯುತ್ ಸೌಲಭ್ಯ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags