Kannada News Now

1.8M Followers

Good News : ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿಸುದ್ದಿ : ಶೀಘ್ರವೇ `ಆರೋಗ್ಯ ಸಿರಿ' ಯೋಜನೆ ಜಾರಿ

20 Jan 2022.06:26 AM

ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ (Government employees) ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ವೆಚ್ಚದ ಮಿತಿ ಇಲ್ಲದೆ 1527 ವೈದ್ಯಕೀಯ ಚಿಕಿತ್ಸೆ/ಶಸ್ತ್ರ ಚಿಕಿತ್ಸೆಗಳ ನಗದು ರಹಿತ ಸೌಲಭ್ಯ ನೀಡುವ ಆರೋಗ್ಯ ಸಿರಿ (Arogya Siri)ಯೋಜನೆ ಶೀಘ್ರವೇ ಜಾರಿಗೆ ಬರಲಿದೆ.

ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್‌ : ಅಡುಗೆ ಎಣ್ಣೆ ಬೆಲೆಯಲ್ಲಿ ʼಶೇ.15ʼರಷ್ಟು ಬೆಲೆ ಇಳಿಕೆ

ರಾಜ್ಯ ಸರ್ಕಾರವು ಆರೋಗ್ಯ ಸಿರಿ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ನೌಕರರು ಮತ್ತು ಅವಲಂಬಿತ ಕುಟುಂಬಸ್ಥರು ಸೇರಿ ರಾಜ್ಯದ 28 ಲಕ್ಷ ಜನರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ 5.40 ಲಕ್ಷ ಸರ್ಕಾರಿ ನೌಕರರಿದ್ದಾರೆ. ಆರೋಗ್ಯ ಸಿರಿ ಯೋಜನೆಗಾಗಿ ಪ್ರತಿ ನೌಕರನ ಮೂಲ ವೇತನದ ಶೇ. 1 ರಷ್ಟು ಹಣ ಕಡಿತಗೊಳಿಸಲಾಗುತ್ತದೆ. ಕಡಿತಗೊಂಡ ಮೂಲ ವೇತನವನ್ನು ಮೂರು ಪಟ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ.

ವಾಟ್ಸಾಪ್‌ನಲ್ಲಿ ʻಪ್ರವಾದಿ ಮುಹಮ್ಮದ್ʼ ವ್ಯಂಗ್ಯಚಿತ್ರ ಶೇರ್ ಮಾಡಿದ್ದಕ್ಕೆ ಪಾಕ್‌ ಮಹಿಳೆಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ…

ಸರ್ಕಾರಿ ನೌಕರರ ಸುಮಾರು 300 ಕೋಟಿ ರೂ. ಗಳಷ್ಟು ಹಣ ಈ ಯೋಜನೆಗೆ ಕಡಿತಗೊಳ್ಳಲಿದ್ದು, ರಾಜ್ಯ ಸರ್ಕಾರ 300 ಕೋಟಿ ರೂ. ಜೊತೆಗೆ 900 ಕೋಟಿ ರೂ. ವಿನಿಯೋಗಿಸಲಿದೆ. ವಾರ್ಷಿಕ 1,200 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ ಎನ್ನಲಾಗಿದೆ.

BIGG NEWS : ಶಬರಿಮಲೆ ಹಾಗೂ ಓಂಶಕ್ತಿ ಯಾತ್ರೆಗೆ ಹೋಗಿಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags